No menu items!
9.3 C
Munich
Wednesday, April 29, 2026

ಕೈಮುಗಿದು ಕಣ್ಣೀರಿಟ್ಟು ಝೊಮ್ಯಾಟೋ ಬಾಯ್ ಹೇಳಿದ್ದೇನು?

Must read

ಬೆಂಗಳೂರು: ಮಹಿಳಾ ಗ್ರಾಹಕರೊಬ್ಬರಿಗೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಝೊಮ್ಯಾಟೋ ಡೆಲಿವರಿ ಬಾಯ್‌ ಕಾಮರಾಜ್‌ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನನ್ನ ತಂದೆ ವಕೀಲರಾಗಿದ್ದರು. ಅವರು ಹದಿನೈದು ವರ್ಷದ ಮುಂಚೆ ಮೃತ ಪಟ್ಟಿದ್ದಾರೆ. ಅದಾದ ಬಳಿಕ ನನಗೆ ವಿದ್ಯಾಭ್ಯಾಸ ಮುಂದುವರಿಸಲು ಆಗಿರಲಿಲ್ಲ. ಹೀಗಾಗಿ ಹೊಟ್ಟೆ ಪಾಡಿಗಾಗಿ ಡೆಲಿವರಿ ಕೆಲಸ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ.

ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ಆರೋಪ ನಿರಾಕರಿಸಿರುವ ಅವರು, ನಾನು ಅವರ ಮೇಲೆ ಕೈ ಮಾಡಿಲ್ಲ. ಈ ವಿಷಯದಲ್ಲಿ ಸತ್ಯ ಗೆಲ್ಲಲಿ ಎಂದು ಹೇಳಿದ್ದಾರೆ.

ಈ ಘಟನೆಯನ್ನು ನಾನು ಮತ್ತಷ್ಟು ಸಂಕೀರ್ಣಗೊಳಿಸಲು ನಾನು ಬಯಸುವುದಿಲ್ಲ. ಸತ್ಯ ಗೆಲ್ಲಲಿ. ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಅಲ್ಲದೇ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳಿ ಬೇಸರ ತೋಡಿಕೊಂಡಿರುವ ಅವರು, ನನ್ನ ತಂದೆ ಹದಿನೈದು ವರ್ಷದ ಹಿಇದೆ ಮೃತ ಪಟ್ಟಿದ್ದಾರೆ. ಮನೆಯಲ್ಲಿರುವ ತಾಯಿಗೆ ಹುಷಾರಿಲ್ಲ. ತುತ್ತು ಅನ್ನ ಸಂಪಾದಿಸಬೇಕಾದರೆ ನಾನು ದುಡಿಯಲೇ ಬೇಕು ಎಂದು ಕಣ್ಣೀರಿಟ್ಟಿದ್ದಾರೆ.

ಕಳೆದ 26 ತಿಂಗಳಿನಿಂದ ನಾನು ಝೊಮ್ಯಾಟೋದಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ 4.7 ರೇಟಿಂಗ್‌ ಕೂಡ ಇದೆ. ಈ ಘಟನೆಯಿಂದಾಗಿ ನನ್ನ ಮನಸ್ಸಿಗೆ ಆಘಾತವಾಗಿದೆ. ಈ ಘಟನೆ ತಾರ್ಕಿಕ ಅಂತ್ಯಕ್ಕೆ ಬರುವ ವರೆಗೂ ನನ್ನ ಐಡಿಯನ್ನು ಕಂಪನಿ ಬ್ಲಾಕ್‌ ಮಾಡಿದೆ ಎಂದು ಹೇಳಿದ್ದಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಈ ಚರ್ಚೆಗೆ ಗ್ರಾಸವಾಗಿತ್ತು. ಆದರೆ ತಾನು ಹಲ್ಲೆ ಮಾಡಿಲ್ಲ ಎಂದು ಕಾಮರಾಜ್‌ ಹೇಳಿಕೊಂಡಿದ್ದರು. ಆಕೆಯೇ ತನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಳು ಎಂದು ಆರೋಪಿಸಿದ್ದರು.

ಫುಡ್‌ ಡೆಲಿವರಿ ವೇಳೆ ಕಾಮರಾಜ್‌ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹಿತೇಶ ಚಂದ್ರಾಣಿ ಎಂಬವರು ಆರೋಪ ಮಾಡಿದ್ದರು. ಮೂಗಿನಿಂದ ರಕ್ತ ಸೋರುತ್ತಿರುವ ದೃಶ್ಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ಸದ್ಯ ಘಟನೆಯು ವಿಚಾರಣೆ ಹಂತದಲ್ಲಿದ್ದು, ಚಂದ್ರಾಣಿಯ ವೈದ್ಯಕೀಯ ಖರ್ಚು ಹಾಗೂ ಕಾಮರಾಜ್‌ ಅವರ ಕಾನೂನು ಹೋರಾಟದ ಖರ್ಚನ್ನು ಭರಿಸುವುದಾಗಿ ಝೊಮ್ಯಾಟೋ ಹೇಳಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article