ಯುವರತ್ನ ಬಿಡುಗಡೆಗೊಂಡು ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಒಂದೊಳ್ಳೆ ಸಂದೇಶ ಹೊಂದಿರುವ ಯುವರತ್ನ ಚಿತ್ರ ತೆರೆಯ ಮೇಲೆ ಮ್ಯಾಜಿಕ್ ಮಾಡುತ್ತಾ ಮತ್ತೊಂದು ದೊಡ್ಡ ಚಿತ್ರವಾಗುತ್ತಿದೆ.
ತೆರೆಯ ಮೇಲೆ ಅಪ್ಪು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದರೆ , ಚಿತ್ರಮಂದಿರದ ಆಚೆ ಅದೇ ಅಪ್ಪು ಅಭಿಮಾನಿಗಳು ಸಮಾಜಕ್ಕೆ ಒಳ್ಳೆಯ ಕೆಲಸವನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಹೌದು ಹುಬ್ಬಳ್ಳಿಯ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹದಿನೈದು ಅಂಗವಿಕಲರಿಗೆ ಯುವರತ್ನ ಚಿತ್ರದ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರದಲ್ಲಿ ಈ ಕೃತಕ ಕಾಲು ಜೋಡಣೆ ಮಾಡುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ.
ಈ ಮೂಲಕ ನಟನಂತೆ ಅಭಿಮಾನಿಗಳು ಎಂದು ಪುನೀತ್ ಅಭಿಮಾನಿಗಳು ಸಾಬೀತುಮಾಡಿದ್ದಾರೆ.