ಯುವರತ್ನ ನಿಗೆ 100% ಚಿತ್ರಮಂದಿರ !

0
36

ಯುವರತ್ನ ಚಿತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಅರ್ಧದಷ್ಟು ಚಿತ್ರಮಂದಿರವನ್ನ ಘೋಷಿಸಿ ಅಡ್ಡಿಯನ್ನುಂಟು ಮಾಡಿತ್ತು. ಸರ್ಕಾರದ ಈ ಸರಿಯಿಲ್ಲದ ಕ್ರಮವನ್ನು ವಿರೋಧಿಸಿದ ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರಮುಖ ನಟರು ಮತ್ತು ನಟಿಯರು ಯುವರತ್ನ ಚಿತ್ರಕ್ಕೆ ಸಂಪೂರ್ಣ ಚಿತ್ರಮಂದಿರದ ಅವಕಾಶವನ್ನು ಕೊಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಮಾಡಲು ಆರಂಭಿಸಿದರು.

 

 

ಇನ್ನು ಇಂದು ಯುವರತ್ನ ಚಿತ್ರತಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಭೆ ನಡೆಸಿದೆ. ಮೂಲಗಳ ಪ್ರಕಾರ ಯುವರತ್ನ ಚಿತ್ರತಂಡದ ಮನವಿಗೆ ಬಿಎಸ್ ಯಡಿಯೂರಪ್ಪನವರು ಒಪ್ಪಿಕೊಂಡಿದ್ದು ಯುವರತ್ನ ಚಿತ್ರಕ್ಕೆ ಸಂಪೂರ್ಣ ಚಿತ್ರಮಂದಿರದಲ್ಲಿ ಚಿತ್ರವನ್ನು ಪ್ರದರ್ಶಿಸುವ ಅವಕಾಶವನ್ನು ನೀಡಲಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here