ಪೂಮಾದಿಂದ ಉಚಿತ ಶೂ ಪಡೆದಿದ್ದ ಕ್ರಿಕೆಟಿಗನಿಗೆ ಸಂಕಷ್ಟ!

Date:

ಇತ್ತೀಚೆಗಷ್ಟೇ ಜಿಂಬಾಬ್ವೆ ತಂಡದ ಆಟಗಾರ ರ‍್ಯಾನ್ ಬರ್ಲ್‌ ಕ್ರಿಕೆಟ್ ಆಡಲು ಸರಿಯಾದ ಶೂ ಇಲ್ಲ, ಕಿತ್ತುಹೋದ ಶೂಗಳನ್ನು ಧರಿಸಿ ಕ್ರಿಕೆಟ್ ಆಡುತ್ತಿದ್ದೇವೆ, ಪ್ರತಿ ಸರಣಿ ಮುಗಿದ ನಂತರ ಕಿತ್ತುಹೋದ ಶೂಗಳನ್ನು ನಾವೇ ಅಂಟಿಸಿಕೊಳ್ಳುತ್ತಿದ್ದೇವೆ ಹಾಗೂ ಹೊಲಿದುಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ಮಾಡುವುದರ ಮೂಲಕ ಯಾರಾದರೂ ಶೂ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಿ ಎಂದು ಮನವಿಯನ್ನು ಮಾಡಿದ್ದರು.


ರ‍್ಯಾನ್ ಬರ್ಲ್‌ ಮಾಡಿದ ಈ ಟ್ವೀಟ್ ಮನವಿಗೆ 24 ಗಂಟೆಯೊಳಗೆ ಸ್ಪಂದಿಸಿದ ಪ್ರತಿಷ್ಠಿತ ಶೂ ಸಂಸ್ಥೆ ಪೂಮಾ ಜಿಂಬಾಬ್ವೆ ಆಟಗಾರರಿಗೆ ಉಚಿತ ಶೂಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆಯಿತು. ಈ ಮೂಲಕ ಶೂಗಳಿಲ್ಲದೆ ಕಷ್ಟಪಡುತ್ತಿದ್ದ ಜಿಂಬಾಬ್ವೆ ತಂಡಕ್ಕೆ ಹೊಚ್ಚಹೊಸ ಶೂಗಳು ಸಿಕ್ಕಂತಾಯಿತು. ಪೂಮಾ ಸಂಸ್ಥೆ ಮಾಡಿದ ಈ ಕೆಲಸಕ್ಕೆ ಜಿಂಬಾಬ್ವೆ ತಂಡದ ಆಟಗಾರರು ಸಂತೋಷವನ್ನು ವ್ಯಕ್ತಪಡಿಸಿದರು, ಹಾಗೂ ಟ್ವೀಟ್ ಮೂಲಕ ಮನವಿ ಮಾಡಿದ್ದ ರ‍್ಯಾನ್ ಬರ್ಲ್‌ ಬೇಡಿಕೆ ಈಡೇರಿತು.


ಆದರೆ ಇದೀಗ ಈ ಎಲ್ಲಾ ಚಟುವಟಿಕೆಗಳು ಮುಗಿದ ನಂತರ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ರ‍್ಯಾನ್ ಬರ್ಲ್‌ನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆ. ರ‍್ಯಾನ್ ಬರ್ಲ್‌ ಶೂ ಪ್ರಾಯೋಜಕತ್ವ ಕೇಳಿ ಮಾಡಿದ್ದ ಟ್ವೀಟ್ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್‌ಗೆ ಮಾಡಿರುವ ಅವಮಾನ ಎಂದು ಹೇಳಲಾಗುತ್ತಿದ್ದು ಆತನ ವಿರುದ್ಧ ಕಠಿಣ ಕ್ರಮಕ್ಕೆ ಬೋರ್ಡ್ ಮುಂದಾಗಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ರ‍್ಯಾನ್ ಬರ್ಲ್‌ಗೆ ತಂಡದಲ್ಲಿ ಅವಕಾಶ ಸಿಗುವುದು ಅವಮಾನ ಎಂದು ಹೇಳಲಾಗುತ್ತಿದ್ದು ಟ್ವೀಟ್ ಮೂಲಕ ಕಷ್ಟವನ್ನು ಹಂಚಿಕೊಂಡು ಸಹಾಯ ಪಡೆದಿದ್ದ ರ‍್ಯಾನ್ ಬರ್ಲ್‌ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Share post:

Subscribe

spot_imgspot_img

Popular

More like this
Related

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB! ಬೆಂಗಳೂರುದಲ್ಲಿರುವ ಎಂ....

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಬೃಹತ್ ಮರ!

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ...

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ:...

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ ಚಾಮರಾಜನಗರ: ಹಲವು ದಸರಾ...