No menu items!
12.1 C
Munich
Saturday, May 2, 2026

ಕಾವೇರಿ ನೀರು ಬಿಟ್ಟು ಸಮುದ್ರದ ನೀರನ್ನು ಬಳಸಿಕೊಳ್ಳಿ: ಸುಬ್ರಮಣಿಯನ್ ಸ್ವಾಮಿ ಟ್ವೀಟ್…!

Must read

ಒಂದು ಕಡೆ ಕಾವೇರಿ ನೀರಿಗಾಗಿ ಸುಪ್ರೀಂ ಮೊರೆ ಹೋದ ತಮಿಳುನಾಡು ಅಲ್ಲಿ ತಮ್ಮ ಪರವಾದ ನ್ಯಾಯ ತೀರ್ಪನ್ನು ಬಂದಿರುವ ಕುರಿತು ಸಂತೋಷ ವ್ಯಕ್ತ ಪಡಿಸುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತ ವಾಗ್ತಾ ಇದೆ. ಕಾವೇರಿ ನೀರಿಗೆ ಇದೇ ರೀತಿ ಕರ್ನಾಟಕದೊಂದಿಗೆ ಕದನಕ್ಕಿಳಿಯುವ ಬದಲಾಗಿ ಸಮುದ್ರದ ನಿರನ್ನೇ ಶುದ್ದೀಕರಣ ಮಾಡಿಕೊಂಡು ಬಳಕೆ ಮಾಡಿ ಎಂದು ತಮಿಳುನಾಡಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಛಾಟಿ ಬೀಸಿದ್ದಾರೆ. ಕಾವೇರಿ ನೀರು ಹಂಚಿಕೆ ಕುರಿತಾಗಿ ಕಳೆದೆರಡು ವಾರಗಳಿಂದ ಉಭಯ ರಾಜ್ಯಗಳ ಬೆಳವಣಿಗೆ ಕುರಿತಾಗಿ ಟ್ವೀಟ್ ಮಾಡಿರುವ ಸ್ವಾಮಿ, ಕಾವೇರಿ ನೀರಿಗಾಗಿ ತಮಿಳನಾಡು ಗೋಗರೆಯುವುದನ್ನು ಮೊದಲು ಬಿಡಬೇಕು, ಬದಲಿಗೆ ಸಮುದ್ರದ ನಿರನ್ನು ಶುದ್ಧೀಕರಿಸಿಕೊಂಡು ಕುಡಿಯಲು ಹಾಗೂ ನೀರಾವರಿಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ
ಇನ್ನು ಸುಬ್ರಮಣಿಯನ್ ಸ್ವಾಮಿ ಅವರ ಈ ಟ್ವೀಟ್‍ಗೆ ಎಲ್ಲಾ ಭಾಗಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಮುದ್ರದ ನೀರನ್ನು ಬಳಸಿಕೊಳ್ಳಲು ಬೇಕಾದ ಎಲ್ಲಾ ವಿಧದ ತಂತ್ರಜ್ಞಾನ ನಮ್ಮಲ್ಲಿದ್ದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸರ್ಕಾರಗಳು ವಿಫಲವಾಗುತ್ತಿದೆ ಎಂದು ಟ್ವೀಟರ್ ಯೂಸರ್ಸ್ ಅಭಿಪ್ರಾಯಪಟ್ಟಿದ್ದಾರೆ

POPULAR  STORIES :

ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!

ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ

ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!

ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.

ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article