ಆಂಗ್ ಸಾನ್ ಸೂಕಿ ನೀಡಿದ್ದ ಅತ್ಯುನ್ನತ ಪ್ರಶಸ್ತಿ ಹಿಂಪಡೆಯಲು ಕಾರಣ‌..?

Date:

ದಿಟ್ಟತನದ ಸತತ ಹೋರಾಟ, ಶ್ರದ್ಧೆ, ಧೈರ್ಯ, ಶಿಸ್ತುಬದ್ಧ ಜೀವನದಿಂದ ಅಸಾಮಾನ್ಯವಾದದ್ದನ್ನು ಸಾಧಿಸಬಹುದು ಎಂಬುದಕ್ಕೆ ಈಕೆ ಉತ್ತಮ ಉದಾಹರಣೆ ಎನ್ನಬಹುದು. ಅಂದಹಾಗೆ ಈಕೆಯ ಹೆಸರು ಆಂಗ್ ಸಾನ್ ಸೂಕಿ ಅಂತ.

ತಮ್ಮ ವೈಯಕ್ತಿಕ ಬದುಕಿನ ಸುಖವನ್ನು ಬದಿಗಿತ್ತು ದೇಶದ ಸ್ವಾತಂತ್ರ್ಯಕ್ಕಾಗಿ, ಸಾಮಾನ್ಯ ಜನರ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸಿದ ಮಾದರಿ ಮಹಿಳೆ ಹೆಣ್ಣು. ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಅಲ್ಲಿನ ಸೇನೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಾರಣಕ್ಕಾಗಿ ಆಂಗ್ ಸನ್ ಸೂಕಿ ಅವರಿಗೆ ನೀಡಿದ್ದ ಅತ್ಯುನ್ನತ ಪ್ರಶಸ್ತಿಯನ್ನು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಹಿಂಪಡೆದಿದೆ. 1991ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದ ಅಂಗ್ ಸಾನ್ ಸೂಕಿ ಕಳೆದುಕೊಂಡಿರುವ ಅತ್ಯುನ್ನತ ಗೌರವ ಇದಾಗಿದೆ.

ಸೂಕಿ ಅವರಿಗೆ 2009ರಲ್ಲಿ ನೀಡಿದ ಅತ್ಯುನ್ನತ ಅಂಬಾಸಿಡರ್ ಆಫ್ ಕನ್‌ಸೈನ್ಸ್ (ಆತ್ಮಸಾಕ್ಷಿಯ ರಾಯಭಾರಿ) ಗೌರವನ್ನು ರದ್ದುಪಡಿಸಿರುವುದಾಗಿ ಲಂಡನ್ ಮೂಲದ ಮಾನವಹಕ್ಕು ಸಂಘಟನೆ ಪ್ರಕಟಿಸಿದೆ. “ನೀವು ಇನ್ನು ಮುಂದೆ ನಿರೀಕ್ಷೆ, ಸಾಹಸ ಮತ್ತು ಮಾನವಹಕ್ಕುಗಳ ಸಂರಕ್ಷಣೆಯನ್ನು ಪ್ರತಿನಿಧಿಸುವ ಸಂಕೇತವಾಗಿ ಉಳಿದಿಲ್ಲ ಎಂಬ ತೀವ್ರ ನಿರಾಸೆಯಿಂದ ಪ್ರಕಟಿಸುತ್ತಿದ್ದೇವೆ” ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮುಖ್ಯಸ್ಥರಾದ ಕುಮಿ ನಯ್ಡೂ ಸೂಕಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಆತ್ಮ ಸಾಕ್ಷಿಯ ರಾಯಭಾರಿ ಪ್ರಶಸ್ತಿಯ ಗೌರವದ ಸ್ಥಾನ ಮಾನವನ್ನು ನೀವು ಉಳಿಸಿಕೊಳ್ಳುವುದನ್ನು ಸಮರ್ಥಿಸಿಕೊಳ್ಳಲ್ಲು ಸಾಧ್ಯವಿಲ್ಲ.. ಆದ್ದರಿಂದ ತೀರಾ ಬೇಸರದಿಂದ ಈ ಪ್ರಶಸ್ತಿಯನ್ನು ಹಿಂಪಡೆಯುತ್ತಿದ್ದೇವೆ ಎಂದು ಕಾರಣವನ್ನು ಸಹ ನೀಡಿದೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...