ಕರ್ನಾಟಕ ವಿಧನಾ ಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದ್ದು, ತನ್ನ ಪಡೆಯನ್ನು ರಚಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಬೇರೆ ಪಕ್ಷಗಳನ್ನು ತೊರೆದು ತನ್ನ ಕಡೆಗೆ ಬಂದ 17 ಮಂದಿ ವಲಸಿಗರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಬಿಜೆಪಿ, ಜೆಡಿಎಸ್ ತೊರೆದು ಬಂದವರಿಗಲ್ಲದೆ ಪಕ್ಷೇತರರಿಗೂ ಕಾಂಗ್ರೆಸ್ ಟಿಕೆಟ್ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇವರೇ ನೋಡಿ ವಲಸೆ ಬಂದು ಟಿಕೆಟ್ ಪಡೆದ ಕಲಿಗಳು
* ಅನಿಲ್ಕುಮಾರ್ ಚಿಕ್ಕಮಾದು – ಹೆಚ್ಡಿ ಕೋಟೆ ( ಜೆಡಿಎಸ್)
* ಆನಂದ್ಸಿಂಗ್ – ಹೊಸಪೇಟೆ (ಬಿಜೆಪಿ)
* ನಾಗೇಂದ್ರ – ಬಳ್ಳಾರಿ (ಸ್ವತಂತ್ರ)
* ಸತೀಶ್ ಸೈಲ್ – ಕಾರವಾರ (ಸ್ವತಂತ್ರ)
* ಮಂಕಾಳ ಸುಬ್ಬವೈದ್ಯ – ಭಟ್ಕಳ (ಸ್ವತಂತ್ರ)
* ಚಲುವರಾಯಸ್ವಾಮಿ – ನಾಗಮಂಗಲ (ಜೆಡಿಎಸ್)
* ರಮೇಶ್ ಬಂಡಿಸಿದ್ದೇಗೌಡ – ಶ್ರೀರಂಗಪಟ್ಟಣ (ಜೆಡಿಎಸ್)
* ಬಾಲಕೃಷ್ಣ – ಮಾಗಡಿ (ಜೆಡಿಎಸ್)
* ಅಖಂಡ ಶ್ರೀನಿವಾಸಮೂರ್ತಿ – ಪುಲಿಕೇಶಿನಗರ (ಜೆಡಿಎಸ್)
* ಜಮೀರ್ ಅಹಮ್ಮದ್ಖಾನ್ – ಚಾಮರಾಜಪೇಟೆ (ಜೆಡಿಎಸ್)
* ಭೀಮಾನಾಯ್ಕ್ – ಹಗರಿ ಬೊಮ್ಮನಹಳ್ಳಿ (ಜೆಡಿಎಸ್)
* ಇಕ್ಬಾಲ್ ಅನ್ಸಾರಿ – ಗಂಗಾವತಿ (ಜೆಡಿಎಸ್)
* ಕೊತ್ತನೂರು ಮಂಜು – ಮುಳಬಾಗಿಲು (ಸ್ವತಂತ್ರ)
* ಸುಬ್ಬಾರೆಡ್ಡಿ – ಬಾಗೆಪಲ್ಲಿ (ಸ್ವತಂತ್ರ)
* ಅಶೋಕ್ ಖೇಣಿ – ಬೀದರ್ ದಕ್ಷಿಣ (ಸ್ವತಂತ್ರ)
* ಎ.ಆರ್ ಕೃಷ್ಣಮೂರ್ತಿ – ಕೊಳ್ಳೇಗಾಲ (ಬಿಜೆಪಿ)
* ಶ್ರೀಮಂತ ಪಾಟೀಲ್ – ಕಾಗವಾಡ ( ಜೆಡಿಎಸ್)