ಸ್ಯಾಂಡಲ್ ವುಡ್ ‘ಬಾಸ್’ ಯಾರು ಎಂಬ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಭಿಮಾನಿಗಳು ಇನ್ನೊಬ್ಬ ನಟರ ವಿರುದ್ಧ ಮನಬಂದಂತೆ ಮಾತಾಡುತ್ತಿದ್ದಾರೆ. ಇದು ತಾರಕಕ್ಕೇರಿದೆ.
ಈ ಹೊತ್ತಲ್ಲಿ ದರ್ಶನ್ ಅಭಿಮಾನಿಗಳಿಗೆ ಬುದ್ಧಿ ಹೇಳಿ, ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನ್ ತಮ್ಮ ಆರ್ ಆರ್ ನಗರದ ನಿವಾಸಕ್ಕೆ ಅಭಿಮಾನಿಗಳನ್ನು ಕರೆಸಿ ‘ಫ್ಯಾನ್ಸ್ ಸಭೆ’ ನಡೆಸಿದ್ದಾರೆ…! ಅವರೊಂದಿಗೆ ನೇರವಾಗಿ ಮಾತಾಡಿರುವ ಚಾಲೆಂಜಿಂಗ್ ಸ್ಟಾರ್ , ಬೇರೆ ಯಾವುದೇ ನಟರ ವಿರುದ್ಧ ಕಾಮೆಂಟ್ ಮಾಡುವುದು, ಟ್ರೋಲ್ ಮಾಡೋದು ಅಥವಾ ನೆಗಿಟೀವ್ ಸ್ಟೇಟ್ ಮೆಂಟ್ ಗಳನ್ನು ನೀಡಬಾರದೆಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಸುಮಾರು 40ಕ್ಕೂ ಹೆಚ್ಚು ದರ್ಶನ್ ಅಭಿಮಾನಿಗಳು ಪಾಲ್ಗೊಂಡಿದ್ದು, ಅವರು ದರ್ಶನ್ ಮಾತಿನಂತೆ ನಡೆದುಕೊಳ್ಳೋದಾಗಿ ಹೇಳಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.