ಜಗದೊಡಲ ಜಯ

Date:

ಜಗದೊಡಲ ಜಯ

ಹುಟ್ಟು ಸಾವಿನ ನಟ್ಟನಡುವೆ
ಬಿಟ್ಟು ಹೋದ ಮೂಟೆ ಎರಡೇ
ಏಳು ಗೋಳು..
ಎದೆಗೆ ನಾಟಿದ ಮಾತಿನ
ಈಟಿ ಏಟಿಗೆ ಪಾಠ ಕಲಿಸಿದ
ನೋಟವೊಂದೆಯೇ ನಗುವು.
ಜಗವು ಜೇನಾಗಿ ಅದರೊಳಗಿನ
ಹುಳುವು ನೋವಾಗಿ
ಹಗೆಯ ಸಾಧಿಸುತಿಹುದು
ಹೂವ ಮನಸಿನ ಶಿವನ ನೆನೆದು
ಕಲ್ಲನೆಸೆದವರ ಮನೆಗೆ ಹೂವ ತಂದಿಟ್ಟು
ಮುಗುಳ್ನಗುವ ಕಾವ್ಯದತ್ತನ
ಎದೆಯೊಳು ಹಾಲಿಹುದು
ವಿಷವ ನುಂಗಿದ ನೋವಿಹುದು
ಆದರೇನು ಗುರಿಯ ಗರಿಯಲಿ
ಬರೆಯು ಮೈಮನಸಲಿ ಸೆರೆಯಾಗಿ
ಸುಲಿದ ಚರ್ಮವು ಬದುಕಿನ
ಕಾಲುದಾರಿಯ ಚಪ್ಪಲಿಗಳಾದವು
ನೋವನೆದುರಿಸುವ ಬತ್ತಳಿಕೆಗಳಾದವು.

?ದತ್ತರಾಜ್ ಪಡುಕೋಣೆ?

Share post:

Subscribe

spot_imgspot_img

Popular

More like this
Related

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...