ನೋವಗರಡಿಯ ಶಕ್ತಿ

Date:

ನೋವಗರಡಿಯ ಶಕ್ತಿ

ಸರಸರನೆ ಸರಿದ ಸಮಯದಿ
ಸುರಿದ ಜಡಿಮಳೆಯ ನೆತ್ತಿ ಮೇಲೆ
ಹೊತ್ತು ಸಾಲು ಸಾಲಿನಾ
ನೋವಿನಾ ಬೀಜವ
ಮನದಿ ನೆಟ್ಟು
ಜಗದ ಕಣ್ಣೊಳಗೆ ನಗುವೆಂಬ
ಕಾರ್ಮೋಡವ ಹರಡಿ
ಎದೆಭಾರ ಹಗುರವಾಗುವುದೆಂದು
ಒಂಟಿತನದ ಸೆರಗ ಹಾಸಿದಾಗ
ಅಲ್ಲೊಂದು ಗುಡುಗು-
ಇಲ್ಲೊಂದು ಸಿಡಿಲು
ಮಡಿಲ-ಒಡಲ ಕಣ್ಣೀರ
ಕಡಲ ಕಲಕಿ ಹೊಸಬೆಳಕ
ಅರಸುತಿರುವಾಗ
ಕಾವ್ಯದತ್ತನು ಕನಸ
ಗೋಪುರವ ಕಟ್ಟಿ
ನನಸಿನೂರಿನ ಸಂಗವ ಮಾಡೆಂದು
ಮತ್ತದೇ ಮುಗುಳ್ನಗೆಯ ಬಿತ್ತಿ
ಮರೆಯಾದನು-ಗುರಿಯಗುರುವಾದನು.
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ!

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ! ಬೆಂಗಳೂರು: ಡಿಜಿಪಿ...

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಬೆಂಗಳೂರು: ಪ್ರಧಾನಮಂತ್ರಿ...

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ ರೆಡ್ಡಿ ಆರೋಪ

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ...

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು!

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು! ಉಗುರು ಕಚ್ಚುವುದು...