ಆಸ್ಪತ್ರೆಯ ಮೇಲ್ಮಹಡಿಗೆ ಗಂಡನನ್ನು ಎಳೆದುಕೊಂಡೇ ಹೋದ ಪತ್ನಿ..!

admin
By admin
1 Min Read

ಅಬ್ಬಾಬ್ಬಾ ಎಂಥಾ ಮನ ಕಲುಕುವ ಘಟನೆಯಿದು..! ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಗಂಡನನ್ನು ಆಸ್ಪತ್ರೆಯ ಮೇಲ್ಮಹಡಿಗೆ ಕರೆದುಕೊಂಡು ಹೋಗಿದ್ದು ಹೇಗೆ ಗೊತ್ತಾ..? ತನ್ನ ಕೈಯಿಂಂದಲೇ ದರ ದರನೆ ಎಳೆದುಕೊಂಡು ಹೋದದ್ದು..! ಇವಳೆಂತಾ ಪಾಪಿ ಪತ್ನಿ ಇರ್ಬೋದು ಅಂತ ಬಯ್ಯೋಕು ಮುನ್ನ ಈಕೆ ಈ ರೀತಿ ಮಾಡೋಕೆ ಕಾರಣವಾದ್ರೂ ಏನು ಅನ್ನೋದು ತಿಳಿಯಬೇಕು. ಆಂಧ್ರ ಪ್ರದೇಶದ ಗುಂಡ್ಕಲ್ ಆಸ್ಪತ್ರೆಯಲ್ಲಿ ವೀಲ್ ಚೇರ್ ಮತ್ತು ಸ್ಟ್ರೆಚರ್ ಇಲ್ಲದೇ ಅಸಹಾಯಕಳಾದ ಪತ್ನಿ ಈ ರೀತಿ ಗಂಡನನ್ನು ಎಳೆದುಕೊಂಡು ಹೋಗಬೇಕಾಯ್ತು..! ಅಚ್ಚರಿಯ ಸಂಗತಿ ಅಂದ್ರೆ ಆಸ್ಪತ್ರೆಯ ಸಿಬ್ಬಂಧಿಗಳ ಎದುರೆ ಈ ಘಟನೆ ಸಂಭವಿಸ್ತಾ ಇದ್ರೂ ಯಾರೂ ಕೂಡ ಸಹಾಯ ಮಾಡಲು ಹೋಗ್ಲೇ ಇಲ್ಲ..!
ತಿಲಕ್ ನಗರ ನಿವಾಸಿಯಾದ 49 ವರ್ಷದ ಪಿ. ಶ್ರೀನಿವಾಸಾಚಾರಿ ಸೆಕ್ಯೂರಿಟಿ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಮಧ್ಯವ್ಯಸನಿಯಾದ ಈತನಿಗೆ ಕಳೆದ ಮೂರು ತಿಂಗಳ ಹಿಂದೆ ಡಯೇರಿಯಾ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಪತ್ನಿ ಶ್ರೀವಾಣಿ ಆತನನ್ನು ಗುಂಡ್ಕಲ್ ಆಸ್ಪತ್ರೆ ಕರೆತಂದಿದ್ರು. ತನ್ನ ಗಂಡನಿಗೆ ವೀಲ್‍ಚೇರ್ ಅಥವಾ ಸ್ಟ್ರೆಚರ್ ನೀಡಿ ಎಂದು ಮನವಿ ಮಾಡಿಕೊಂಡರೂ ಅಲ್ಲಿನ ಸಿಬ್ಬಂದಿಗಳು ನಿರ್ಲಕ್ಷಿಸಿದ್ದಾರೆ. ತೀರಾ ಕಾಲು ನೋವಿನಿಂದ ಬಳಲುತ್ತಿದ್ದ ಗಂಡನನ್ನು ಬೇರೆ ದಾರಿ ಕಾಣದೇ ಚಿಕಿತ್ಸೆಗೆಂದು ಆಸ್ಪತ್ರೆಯ ಮೇಲ್ಮಹಡಿಯವರೆಗೂ ಎಳೆದುಕೊಂಡೆ ಹೋಗಿದ್ದಾಳೆ..! ಈ ವಿಚಾರ ಎಲ್ಲಾ ಕಡೆ ವೈರಲ್ ಆಗ್ತಾ ಇದೆ ಎಂದು ತಿಳಿದ ಆಸ್ಪತ್ರೆಯ ಮೇಲಾಧಿಕಾರಿಗಳು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Like us on Facebook  The New India Times

POPULAR  STORIES :

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share This Article