ಜೈಲಿಗೆ ಹೋಗಿ ಬಂದ ದುನಿಯಾ ವಿಜಯ್​ಗೆ ಸಿಗುತ್ತಾ ಭರ್ಜರಿ ಸಕ್ಸಸ್​..?

Date:

ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ನಂಬಿಕೆ ಇದೆ. ಅದೇನಪ್ಪಾ ಅಂದ್ರೆ, ಯಾರಾದ್ರು ಹೀರೋ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿ ಬಂದ್ರೆ ಯಶಸ್ಸು ಹಿಂಬಾಲಿಸುತ್ತೆ. ಕಳೆದ ಅನೇಕ ನಟರ ಬದುಕಿನಲ್ಲಿ ಇದು ನಿಜವೂ ಆಗಿದೆ. ಹೀಗಾಗಿಯೇ ದುನಿಯಾ ವಿಜಯ್​ಗೂ ಇಂಥಾದ್ದೇ ಅದೃಷ್ಟ ಒಲಿದು ಬರುತ್ತಾ ಅನ್ನೋ ಪ್ರಶ್ನೆಯೊಂದು ಉದ್ಭವಿಸಿದೆ.

2011ರಲ್ಲಿ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹಲ್ಲೆ ಮಾಡಿ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಜೈಲು ಸೇರಿದ್ದರು. ಅವರು ಜೈಲಿನಲ್ಲಿ ಇರುವಾಗಲೇ ದರ್ಶನ್​ ಅಭಿನಯದ ಸಾರಥಿ ಚಿತ್ರ ಬಿಡುಗಡೆಯಾಗಿತ್ತು. ಅದುವರೆಗೆ ಸಾಲು ಸಾಲು ಸೋಲನ್ನ ಕಂಡಿದ್ದ ದರ್ಶನ್​ಗೆ ಸಾರಥಿ ಅದ್ಭುತ ಯಶಸ್ಸನ್ನ ತಂದುಕೊಟ್ಟಿತ್ತು.
ಇದೊಂದೇ ಅಲ್ಲ, ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ ಕೂಡ ಜೈಲಿಗೆ ಹೋಗಿ ಬಂದಿದ್ದರು. 1998ರಲ್ಲಿ ಸಲ್ಮಾನ್​ ಖಾನ್​ ಜೈಲು ದರ್ಶನ ಮಾಡಿದ್ದರು. ಜೈಲಿನಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಸಲ್ಮಾನ್ ಅವರ ಚಿತ್ರಗಳು ಯಶಸ್ಸನ್ನ ಕಂಡಿದ್ದವು.
ಇನ್ನೊಂದೆಡೆ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಸಂಜಯ್​ ದತ್​ ಕೇಸ್​ನಲ್ಲೂ ಇದೇ ಆಗಿತ್ತು. ಸಾಲು ಸಾಲು ಸೋಲು ಕಂಡ ಸಮಯದಲ್ಲೇ ಸಂಜಯ್​ ದತ್​ ಕೂಡ ಜೈಲು ಸೇರಿದ್ದರು. ಜೈಲಿನಿಂದ ಹೊರ ಬಂದ ಬಳಿಕವೇ ಅವರ ಮುನ್ನಾಭಾಯಿ ಎಂಬಿಬಿಎಸ್​, ಲಗೇರಹೋ ಮುನ್ನಾಭಾಯಿ ಚಿತ್ರಗಳಿಗೆ ಅದ್ಭುತ ಯಶಸ್ಸು ಸಿಕ್ಕಿದ್ದು.
ದುನಿಯಾ ವಿಜಯ್ ಕೂಡ ಸಾಲು ಸಾಲು ಸೋಲನ್ನೇ ಕಂಡಿದ್ದಾರೆ. ಈಗ ವಿಜಯ್​ ಹಾಗೂ ಅವರ ಪುತ್ರ ಸಾರ್ಮಾಟ್​ ಅಭಿನಯದ ಕುಸ್ತಿ ಚಿತ್ರದ ಶೂಟಿಂಗ್​ ನಡೆಯುತ್ತಿದ್ದು, ಡಿಸೆಂಬರ್​ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದುವರೆಗೆ ಚಿತ್ರರಂಗದಲ್ಲಿ ನಡೆದು ಬಂದಿರುವುದು ನಿಜವೇ ಆದಲ್ಲಿ, ಕುಸ್ತಿ ಕೂಡ ಸೂಪರ್​ ಡೂಪರ್​ ಹಿಟ್​ ಆಗಬಹುದು.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...