ಚಾಲೆಂಜ್ ಮಾಡಿ ಎಣ್ಣೆ ಹೊಡ್ದು ಸತ್ತೇ ಹೋದ…! ಎಣ್ಣೆ ಹೊಡಿಯೋರೆ ಎಚ್ಚರ…!

Date:

ಎಂಥೆಂಥಾ ಚಾಲೆಂಜ್ ಮಾಡ್ತಾರೆ..! ಆ ಚಾಲೆಂಜಲ್ಲಿ ಗೆಲ್ಬೇಕು ಅಂತ ಹಠ ಹಿಡಿದು ಪ್ರಾಣವನ್ನೇ ಕಳ್ಕೊತ್ತಾರೆ ಅಂತಾದ್ರೆ ಏನ್ ಹುಚ್ಚು..?!
ಇಂತಹದ್ದೇ ಹುಚ್ಚು ಚಾಲೆಂಜ್ ಗೆಲ್ಲೋಕೆ ಪಣ ತೊಟ್ಟ ವ್ಯಕ್ತಿ ಸೀದಾ ಈ ಲೋಕವನ್ನೇ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೇಲಿ ನಡ್ದಿದೆ.


ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ ತಮ್ಮನಹಳ್ಳಿ ಗ್ರಾಮದಲ್ಲಿ ಒಂದಿಷ್ಟು ಜನ ನಿನ್ನೆ ರಾತ್ರಿ ಕುಡಿತದ ಪಾರ್ಟಿ ಇಟ್ಕೊಂಡಿದ್ರು. ಆಗ ಪುರುಷೋತ್ತಮ್ (45)ಎಂಬ ವ್ಯಕ್ತಿ ನವೀನ್ ಎಂಬುವವರ ವಿರುದ್ಧ ‘ನನಗೆ 5 ಕ್ವಾಟರ್ ಕುಡಿದ್ರೂ ಏನೂ ಆಗಲ್ಲ’ ಅಂತ ಚಾಲೆಂಜಿಂಗ್ ಮಾಡಿ ಕುಡಿದಿದ್ದಾನೆ. ಆಗ ಅಮಲು ಹೆಚ್ಚಾಗಿ ಬಿದ್ದ ಪುರುಷೋತ್ತಮನನ್ನು ಸ್ನೇಹಿತರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರ್ಕೊಂಡ್ ಹೋಗಿದ್ದಾರೆ…ಅಷ್ಟರಲ್ಲಾಗಲೇ ಪುರುಷೋತ್ತಮ್ ಪ್ರಾಣ ಪಕ್ಷಿ ಹಾರಿಹೋಗಿತ್ತು.


ಎಣ್ಣೆ ಹೊಡಿಯೋದ್ ಬಿಡೋದ್ ನಿಮ್ ಇಷ್ಟ..ಹೊಡಿದೇ ಇದ್ರೆ ಭಾರಿ ಒಳ್ಳೇದು. ಹೊಡಿಯೋರು ಇತಿಮಿತಿಯಲ್ಲಿ ಎಣ್ಣೆ ಹಾಕೋದ್ ಬಿಟ್ಟು ಚಾಲೆಂಜ್ ಮಾಡಿ, ಅದರಲ್ಲೇ ಮುಳುಗಿ ಸಾಯ್ಬೇಡಿ.

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...