Enba ಅವಾರ್ಡ್ ಗೆ  ಬಿಗ್ – 3 ಬುಲೆಟ್ ಶೆಟ್ರ ಎಂಟ್ರಿ..

Date:

Enba ಅವಾರ್ಡ್ ಗೆ  ಬಿಗ್ – 3 ಬುಲೆಟ್ ಶೆಟ್ರ ಎಂಟ್ರಿ..

ಸುಮ್ನೆ ಕೂತು ಅಲ್ಲಿ ಹೀಗಾಯ್ತು, ಇಲ್ಲಿ ಹಾಗಾಯ್ತು ಅಂತಾ ಬರೋ ಸುದ್ದಿಯನ್ನ ಓದಿ ಎದ್ದು ಹೋಗುವ ಜಾಯಮ ಇವರದಲ್ಲ.. ಇಲ್ಲೇ ಡ್ರಾ ಇಲ್ಲೆ ಬಹುಮಾನ ಅಂತಾರಲ್ಲ ಆ ಕ್ಯಾಟಗರಿಯ ನಿರೂಪಕ ಇವ್ರು.. ಅಂದಹಾಗೆ ಅವರ ಸ್ಲೋಗನ್ ಕೂಡ ಇದೆ.. ಇವರು ಹಿಡಿದ ಸುದ್ದಿಗೆ ತಾರ್ಕಿಕ ಅಂತ್ಯ ಸಿಗೋವರೆಗು ಬಿಡೋರಲವಿಚಾವದು ಬೇರೆ ಯಾರು ಅಲ್ಲ, ನ್ಯೂಸ್ ಚಾನೆಲ್ ಆ್ಯಂಕರ್ ಗಳ ಪೈಕಿ ಆರಡಿ ಕಟೌಟ್, ಸುವರ್ಣ ನ್ಯೂಸ್ ನ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ..

ನಿಮಗೆ ಬಿಗ್-3 ಅನ್ನೋ ಕಾರ್ಯಕ್ರಮದ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ.. ಬಿಗ್-3ಗೆ ಜಯಪ್ರಕಾಶ್ ಶೆಟ್ಟಿ ಅವರಿದ್ರೆ ಕಳೆ..  ಜನ ಸಾಮಾನ್ಯರು ತಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಹೇಳ್ತಾರೋ ಇಲ್ಲವೊ ಗೊತ್ತಿಲ್ಲ, ಅದೆಲ್ಲ ಈ ಬಿಗ್ -3 ಎಂಬ ವೇದಿಕೆಗೆ ಬರುತ್ತೆ.. ಇದಕ್ಕೆ ಕಾರಣ ಅವರ ನಂಬಿಕೆಯ ಪ್ರತಿರೂಪವಾಗಿರುವ ಬಿಗ್-3 ಹಾಗು ಅದರ ನಿರೂಪಕರಾದ ಜೆ.ಪಿ.ಶೆಟ್ಟಿ ಅವರು.. ಹೀಗಾಗೆ ಪ್ರತಿಯೊಂದು ಸುದ್ದಿಯ ಆಳ ಅಗಲ ಅಳೆದು ಶೆಟ್ರು ಕ್ಯಾಮರ ಮುಂದೆ ಕೂತ್ರೆ, ವರ್ಷಗಳ ಕಾಲ ಪರಿಹಾರವಾಗದ ಸಮಸ್ಯೆಯು ಗಂಟೆಗಳಲ್ಲೆ ಕ್ಲಿಯರ್ ಆಗಿ ಬಿಡುತ್ತೆ..

ಅಂದಹಾಗೆ ಜಯಪ್ರಕಾಶ್ ಶೆಟ್ಟಿ ಅವರು ಬಿಗ್ -3 ಕಾರ್ಯಕ್ರಮದ ಮೂಲಕ ಆಡಳಿತ ವರ್ಗಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ.. ಹುದ್ದೆಗೆ ತಕ್ಕ ಕೆಲಸ ಮಾಡದ ಯಾವುದೇ ಅಧಿಕಾರಿಯಾದ್ರು, ಜನರ ದನಿಯಾಗಿ, ತೂಕದ ಮಾತುಗಳನ್ನಾಡುವ ಶೆಟ್ರ ನಿರೂಪಣ ಶೈಲಿಗೆ ಜನತೆ ಈಗಾಗ್ಲೇ ಫಿದಾ ಆಗಿಯಾಗಿದೆ.. ಸದ್ಯ ಬಿಗ್-3 ಮೂಲಕ ಮನೆಮಾತದ ನೇರ ಮಾತುಗಳ ಬುಲೆಟ್ ಖ್ಯಾತಿ ಜೆ.ಪಿ.ಶೆಟ್ರುಬೆಸ್ಟ್ ಆ್ಯಂಕರ್ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ

Enba ಸಂಸ್ಥೆಯು ಪ್ರತಿವರ್ಷ ಉತ್ತಮ ಸುದ್ದಿವಾಹಿನಿ ಹಾಗು ಸಮಾಜಮುಖಿ ಕಾರ್ಯಕ್ರಮಗಳನ್ನ ಮಾಡುತ್ತ ಬಂದಿರುವ ಸಾಧಕರಿಗೆ ಗೌರವವನ್ನ ಸಲ್ಲಿಸುತ್ತ ಬರುತ್ತಿದೆ.. ಸದ್ಯ ಸುವರ್ಣ ನ್ಯೂಸ್ ನ ಕರೆಂಟ್ ಅಫೇರ್ಸ್ ಎಡಿಟರ್ ಆಗಿರುವ ಜಯಪ್ರಕಾಶ ಶೆಟ್ಟಿಯವರು ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ಎಂಟ್ರಿ ನೀಡಿರೋದು ಹೆಮ್ಮೆ‌ ಪಡುವ ವಿಚಾರವೆ ಅಲ್ವ..

 

Share post:

Subscribe

spot_imgspot_img

Popular

More like this
Related

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...