ದೇಹದ ಸಮತೋಲನ ಸ್ಥಿತಿ ತಪ್ಪಿದಾಗ ದೇಹದ ಹಲವೆಡೆ ಶೇಖರಿಸಲ್ಪಡುವ ಕೊಬ್ಬನ್ನೇ ಬೊಜ್ಜು ಎನ್ನಲಾಗುತ್ತದೆ. ಕೇವಲ ಇದೊಂದೇ ಕಾಯಿಲೆಯಲ್ಲ; ಇದು ಇನ್ನೂ ಅನೇಕ ರೋಗಗಳಿಗೆ ಆಹ್ವಾನ ನೀಡುವ ಆಮಂತ್ರಣ ಪತ್ರಿಕೆ ಇದ್ದಂತೆ. ಇಂತಹುದೇ ರೋಗಕ್ಕೆ ಬಲಿಯಾದವರು ಗುಜರಾತ್ ಮೂಲದ ರಮೇಶ್ ಭಾಯ್ ಯ ಪುಟ್ಟ ಮೂರು ಕಂದಮ್ಮಗಳು; ಯೋಗಿತ,ಅನೀಶ,ಹರ್ಷ. ಯೋಗಿತ ವಯಸ್ಸು 5(48 k.G),ಅನೀಶ ವಯಸ್ಸು3 (34 kg) ಹಾಗೂ ಹರ್ಷ ವಯಸ್ಸು 18 ತಿಂಗಳು(15 kg) .ಈ ಕಂದಮ್ಮ ಗಳು ಹುಟ್ಟುವಾಗ ಸಹಜವಾಗೇ ಇದ್ದು ಕ್ರಮೇಣ ಈ ರೀತಿ ಬದಲಾದರು ಅನ್ನುತ್ತಾರೆ ರಮೇಶ್ ಭಾಯ್;ಇವರು ಹೇಳುವಂತೆ ಮಕ್ಕಳಿಗೆ ನಡೆಯುವುದಾಗಲೀ,ಸ್ನಾನ ಮಾಡಿಸುವುದಾಗಲಿ ತೀರ ಪ್ರಯಾಸದ ಕೆಲಸ ಅನ್ನುತ್ತಾರೆ.ಇನ್ನು ತಿನ್ನೋ ವಿಷಯಕ್ಕೆ ಬಂದಲ್ಲಿ ಇವರುಗಳು ಒಂದು ವಾರದಲ್ಲಿ ತಿನ್ನೋ ಆಹಾರವು 2 ಸಂಸಾರಗಳ ಒಂದು ತಿಂಗಳ ಖರ್ಚು ಎನ್ನುತ್ತಾರೆ.ಇದರ ಕುರಿತಾಗಿ ಇಲ್ಲಿರುವ ವೀಡಿಯೋ ನೋಡಿ.
ಬಡ ಕುಟುಂಬ 34 ವಯಸ್ಸಿನ ರಮೇಶ್ ಭಾಯ್ ಗೆ ಇದೊಂದು ದೊಡ್ಡ ಸಮಸ್ಯೆಯೇ ಸರಿ.ಆಹಾರ ಒದಗಿಸುವುದೋ ಅಥವಾ ಇವರ ಕಾಯಿಲೆಗೆ ಮದ್ದು ಮಾಡುವುದೋ ತಿಳಿಯದಾಗಿದೆ.ಇದಕ್ಕಾಗಿ ತಗಲುವ ವೆಚ್ಚವನ್ನು ಭರಿಸಲು ಅವರು ತನ್ನ ಕಿಡ್ನಿಯನ್ನು ಮಾರಲು ಮುಂದಾಗಿದ್ದಾರೆ.ಕಾಯಿಲೆಗೆ ಮದ್ದು ಮಾಡದೇ ಹೋದ ಪಕ್ಷದಲ್ಲಿ ತನ್ನ ಮಕ್ಕಳು ಸಾವನ್ನಪ್ಪಬಹುದೆಂದು ಅವರು ಭಯಪಡುತ್ತಿದ್ದಾರೆ.
ಬಡತನಕ್ಕೆ ಕಷ್ಟ ಬರಬಾರದು ಅನ್ನುತ್ತಾರೆ,ಕಾಯಿಲೆಯಂತೂ ಬರಲೇಬಾರದಪ್ಪ.ಇದೆಲ್ಲವನ್ನೂ ಸಂಭಾಳಿಸುವ ಶಕ್ತಿ ರಮೇಶ್ ಭಾಯ್ ಗೆ ದೇವರು ಕೊಡಲಿ ಎಂದು ಹಾರೈಸೋಣ.
- ಸ್ವರ್ಣಲತ ಭಟ್
POPULAR STORIES :
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…
ದರ್ಭೆಯನ್ನುಪವಿತ್ರವಾಗಿ ಶುಭ ಹಾಗೂ ಅಶುಭ ಸಂದರ್ಭಗಳಲ್ಲಿ ನಮ್ಮಬಲಕೈ ಬೆರಳಲ್ಲಿ ಯಾಕೆ ಧರಿಸುತ್ತೇವೆ????
ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ