ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

Date:

ನಮ್ಮ ದೇಶದಲ್ಲಿ ಇಡೀ ತಿಂಗಳು ಕಷ್ಟಪಟ್ಟು ಕೆಲಸ ಮಾಡಿದ್ರೂ ಎಷ್ಟೋ ಕಡೆ ಅದಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ. ಇನ್ನೂ ಕೆಲವು ಕಡೆ ಕೆಲಸಕ್ಕಾಗಿ ಅಲೆದಾಡಿದ್ರೂ ಕೆಲಸ ಸಿಗ್ತಿಲ್ಲ. ಆದ್ರೆ ಈ ದೇಶದಲ್ಲಿ ಕೆಲಸ ಮಾಡ್ಲೀ ಮಾಡದೇ ಇರಲಿ, ಆಗರ್ಭ ಶ್ರೀಮಂತನೇ ಆಗಿರಲಿ ಅಥವಾ ನಿರ್ಗತಿಕನಿಗೆ ಆಗಿರಲಿ ಅವನಿಗೆ ತಿಂಗಳ ಆದಾಯ ಖಡ್ಡಾಯವಾಗಿ ಸಿಗಲಿದೆ. ಹೌದು ಅಲ್ಲಿನ ಸರ್ಕಾರ ದೇಶದ ಪ್ರತಿಯೋರ್ವ ನಾಗರಿಕನಿಗೂ ಖಾತರಿ ಸಂಬಳ ನೀಡಲು ಯೋಜಿಸುತ್ತಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ

ಇಂತಹ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲು ಮುಂದಾಗಿರೋದು ಸ್ವಿಸ್‌ ಸರ್ಕಾರ. ಹೌದು ತನ್ನ ದೇಶದ ಪ್ರತಿಯೊಬ್ಬ ನಾಗರಿಕನಿಗೆ 2,500 ಯುಎಸ್‌‌ ಡಾಲರ್‌‌ ಸಂಬಳ,  ಭಾರತದ ಕರೆನ್ಸಿಯಲ್ಲಿ  ಸುಮಾರು 1 ಲಕ್ಷದ 70 ಸಾವಿರ ರೂಪಾಯಿ ವೇತನ ನೀಡಲು ಯೋಜನೆ ಸಿದ್ದಪಡಿಸಿದೆಯಂತೆ.

ಈ ಸಂಬಂಧ ಜೂನ್‌ 5 ರಂದು ಸ್ವಿಡ್ಜರ್‌‌ಲ್ಯಾಂಡಿನಾದ್ಯಂತ ಜನಾಭಿಪ್ರಾಯ ಸಂಗ್ರಹ ಮಾಡಲಿದೆ. ಈ ಪ್ರಸ್ತಾವನೆಗೆ ಇಲ್ಲಿನ ನಾಗರಿಕರು ಸಮ್ಮತಿ ಸೂಚಿಸಿದರೆ ಇಷ್ಟೊಂದು ಮೊತ್ತದ ಸಂಬಳ ನೀಡುವ ಜಗತ್ತಿನ ಮೊಟ್ಟ ಮೊದಲ ರಾಷ್ಟ್ರವಾಗಲಿದೆ ಸ್ವಿಡ್ಜರ್‌‌ಲ್ಯಾಂಡ್.

ಈ ಪ್ರಸ್ತಾವನೆ ಪ್ರಕಾರ ಬರಹಗಾರರು, ಬುದ್ದಿಜೀವಿಗಳು ಸೇರಿದಂತೆ ದೇಶದ ಪ್ರತಿ ವಯಸ್ಕನಿಗೆ 2,500 ಯುಎಸ್‌‌ ಡಾಲರ್‌ನಷ್ಟು ಪ್ರತಿ ತಿಂಗಳು ಸಂಬಳ ಸಿಗಲಿದೆ. ಇನ್ನು ಈ ಯೋಜನೆಯ ಲಾಭವನ್ನು ಮಕ್ಕಳು ಪಡೆಯಲಿದ್ದಾರೆ. ಒಂದೊಮ್ಮೆ ಈ ಯೋಜನೆ ಜಾರಿಗೆ ಬಂದದ್ದೇ ಆದಲ್ಲಿ ಮಕ್ಕಳು ಪ್ರತಿ ತಿಂಗಳು 625 ಯುಎಸ್‌ ಡಾಲರ್‌ನಷ್ಟು ಹಣವನ್ನ ಸ್ಟೈಪಂಡ್‌‌ ರೂಪದಲ್ಲಿ ಪಡೆಯಲಿದ್ದಾರೆ.

ಈ ಯೋಜನೆ ಜಾರಿಗೆ ಸ್ವಿಸ್‌ ಸರ್ಕಾರಕ್ಕೆ ವರ್ಷಕ್ಕೆ 200 ಬಿಲಿಯನ್‌ ಯುಎಸ್‌ ಡಾಲರ್‌ ಹಣದ ಅಗತ್ಯವಿದೆ. ಆದ್ರೆ ಈ ಯೋಜನೆಗೆ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಯಾಕಂದ್ರೆ ಈ ಯೋಜನೆ ಜಾರಿಯಾಗಿ ತಿಂಗಳಿಗೆ ಇಂತಿಷ್ಟು ವೇತನ ಅಂತಾ ಸಿಕ್ಕರೆ ಜನರಲ್ಲಿ ಕೆಲಸದ ಆಸಕ್ತಿ ಕಡಿಮೆಯಾಗಿ ಸೋಮಾರಿಗಳಾಗೋ ಸಾಧ್ಯತೆ ಇದೆ ಅನ್ನೋದು ರಾಜಕೀಯ ಪಕ್ಷಗಳು ವಾದ.

  • ಶ್ರೀ

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

 

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...