ಟೈಮ್ ಪಾಸ್ ಗಾಗಿ 41 ಜನರನ್ನು ಕೊಂದ ಭೂಪನೀತ..! ಈತನ ಮುಂದೆ ದಂಡುಪಾಳ್ಯ ಗ್ಯಾಂಗ್ ಕೂಡಾ ಲೆಕ್ಕಕ್ಕಿಲ್ಲ..!

Date:

ಕೊಲೆಯನ್ನು ಯಾವ ಕಾರಣಕ್ಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಬಹುತೇಕರು ನೀಡುವ ಉತ್ತರವೇನೆಂದರೆ ದ್ವೇಷವೋ, ಆ ಕ್ಷಣದಲ್ಲಿ ನಡೆಯುವ ಘಟನೆಯೋ ಇಲ್ಲಾ ಹಣಕ್ಕಾಗಿಯೋ ಎಂದು ಹೇಳಬಹುದು. ಆದರೆ ಇಲ್ಲೋರ್ವ ವ್ಯಕ್ತಿಗೆ ನೀನು ಯಾಕೆ ಕೊಲೆ ಮಾಡಿದೆ ಎಂದು ಕೇಳಿದರೆ `ಟೈಮ್ಪಾಸ್’ ಗೆ..! ಕೊಲೆ ಅಂದರೆ ಅದು ಮೋಜು ಎನ್ನುತ್ತಾನೆ..! ಪ್ರತಿಯೊಬ್ಬರ ಪ್ರಾಣದೊಂದಿಗೆ ಆಡುವುದು ಖುಷಿ ಕೊಡುವ ಆಟ ಎಂಬ ಉತ್ತರ ನೀಡುತ್ತಾನೆ..! ಇಷ್ಟಕ್ಕೂ ಆ ಮನುಷ್ಯ ಮೋಜಿನ ಖುಷಿಯಲ್ಲಿ ಈತ ಕೊಂದ ಜನರ ಸಂಖ್ಯೆ ಬರೋಬ್ಬರಿ 41!
ಆತನ ಹೆಸರು ಸೈಲ್ಸನ್ ಜೋಸೇಡಾಸ್ ಗ್ರಕಾಸ್. ಈತ ಸೈಕೋ ಕಿಲ್ಲರ್..! ಮಹಿಳೆಯೊಬ್ಬರನ್ನು ಚಿತ್ರಹಿಂಸೆ ನೀಡಿ ಕೊಂದ ಆರೋಪದಲ್ಲಿ ಬಂಧಿತನಾದ ಈ ವ್ಯಕ್ತಿ ತನ್ನ ಈ ಹಿಂದಿನ ಕೊಲೆಯ ರಹಸ್ಯವನ್ನೆಲ್ಲಾ ಒಪ್ಪಿಕೊಂಡಿದ್ದಾನೆ. ಅದೂ ಅಲ್ಲದೆ, ಈತ ಬಿಳಿಯ ಮಹಿಳೆಯನ್ನು ಕೊಂದಿದ್ದಾನೆ. ಕೊಲ್ಲುವುದಕ್ಕೂ ಮುನ್ನ ಆಕೆಯನ್ನು ಹಲವು ದಿನಗಳ ಹಿಂಬಾಲಿಸಿ, ಆಕೆಯ ಬಗ್ಗೆ ತಿಳಿದು ಬಳಿಕ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ. 26 ವರ್ಷದ ಈ ಯುವಕನನ್ನು ಪೊಲೀಸರು ಸೈಕೋಪಾತ್ ಎಂದು ಹೇಳಿದ್ದಾರೆ.
ಈ ಕೊಲೆಗಾರ ಯುವಕ ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಈ ಹಿಂದಿನ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದಾರೆ. ಈ ಕೊಲೆಗಾರ ಒಪ್ಪಿಕೊಂಡಿರುವಂತೆ ಇದುವರೆಗೆ 37 ಮಹಿಳೆಯರು, ಮೂವರು ಗಂಡಸರು ಹಾಗೂ ಎರಡು ವರ್ಷದ ಮಗುವನ್ನು ಕೊಂದಿದ್ದಾನೆ. ಈತ ಮೊದಲು ಕೊಲೆ ಮಾಡಿದ್ದು ತನ್ನ 17ನೇ ವಯಸ್ಸಿನಲ್ಲಿ.
`17ನೇ ವಯಸ್ಸಿನಲ್ಲಿ ಮಹಿಳೆಯೊಬ್ಬಳನ್ನು ಕೊಂದೆ. ಅದು ನನಗೆ ಧೈರ್ಯ ತಂದಿತ್ತು. ಇದನ್ನೇ ಮುಂದುವರಿಸಿಕೊಂಡು ಹೋದೆ. ಇದರಲ್ಲಿ ನನಗೆ ಖುಷಿ ಸಿಕ್ಕಿದೆ.’ ಈತನ ಮೊದಲ ಆದ್ಯತೆ ಮೋಜಾದರೂ, ಯಾರಾದರೂ ಸುಪಾರಿ ಕೊಟ್ಟರೂ ಕೊಲ್ಲುತ್ತಿದ್ದ. ದಂಪತಿಯೊಂದು ಈತನಿಗೆ ಸುಪಾರಿ ಕೊಟ್ಟಿತ್ತು. ಈ ಪ್ರಕರಣದಲ್ಲಿ ಸುಪಾರಿ ಕೊಟ್ಟ ದಂಪತಿಯನ್ನು ಪೊಲೀಸರು ಬಂಧಿಸಿದ್ದರು.
ತನ್ನ ಈ ವೃತ್ತಾಂತವನ್ನೆಲ್ಲಾ ಹೇಳುವ ಈ ಸೈಕೋ ಜೈಲಿಗೆ ಹೋದರೂ ಚಿಂತೆಯಿಲ್ಲ. ಜೈಲಿನಿಂದ ಹೊರಬಂದ ನಂತರ ಮತ್ತೆ ಇದೇ ಕೃತ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದೂ ಹೇಳುತ್ತಿದ್ದಾನೆ..! ಆದರೆ ಅದಕ್ಕೂ ಮೊದಲು ಜೈಲಿನಲ್ಲಿ ಯಾರನ್ನೂ ಕೊಲೆ ಮಾಡದಿರಲಿ ಎಂಬುದೇ ನಮ್ಮ ಆಶಯ..!

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!

ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!

ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!

ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...