ಡಿಸೆಂಬರ್ 2, ಶುಕ್ರವಾರ ಜಯಲಲಿತಾ ಅವರು ಅನಾರೋಗ್ಯದ ಕಾರಣದಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಅನಾರೋಗ್ಯದ ನಡುವೆಯು ಸಿಎಂ ಜಯಲಲಿತಾ ಅವರು ಟಿವಿಯಲ್ಲಿ ನ್ಯೂಸ್ ನೋಡುತ್ತಿದ್ದ ವೇಳೆ ಕೂಡಲೇ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಪಿ ರಮಾ ಮೋಹನ್ ರಾವ್ ಅವರಿಗೆ ಕಾಗದದ ಚೀಟಿಯಲ್ಲಿ ಒಂದು ಸಣ್ಣ ಬರಹ ಬರೆದು ಕಳುಹಿಸಿದ್ರು. ಆ ಬರಹದಲ್ಲಿ ಪ್ರಧಾನಿ ಮೋದಿ ಅವರಿಗೆ ಕುರಿತಾದ ಒಂದು ಸಂದೇಶವಿತ್ತು..! ಆ ಒಂದು ಟಿಪ್ಪಣಿಯಲ್ಲಿ ಜಯಲಲಿತಾ ಭಾರತೀಯರು ಎಷ್ಟು ಪ್ರಮಾಣದಲ್ಲಿ ಚಿನ್ನ ಹೊಂದಿರಬೇಕೆಂಬ ವಿಷಯವಾಗಿ ಹಸ್ತಕ್ಷೇಪ ಮಾಡಬಾರದು ಎಂದು ಮೋದಿ ಅವರಿಗೆ ಸಲಹೆ ನೀಡಿದ್ದರು. ಯಾಕೆಂದರೆ ಭಾರತೀಯರಿಗೆ ಅದು ಭಾವನಾತ್ಮಕ ವಿಷಯ ಅಂತ ಬರೆದಿದ್ದರು ಎಂದು ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ. ಈ ವಿಚಾರ ತಮಿಳುನಾಡಿನಲ್ಲಿದ್ದ ಕೇಂದ್ರದ ಪ್ರತಿನಿಧಿ ಪ್ರಧಾನಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ತಮಿಳುನಾಡಿನ ಹಂಗಾಮಿ ರಾಜ್ಯಪಾಲ ವಿದ್ಯಾ ಸಾಗರ್ ರಾವ್ ಅವರಿಗೆ ಈ ಟಿಪ್ಪಣಿಯನ್ನು ತೋರಿಸಲಾಯ್ತು ಎಂದು ಹೇಳಲಾಗಿದೆ. ಇನ್ನು ಜಯಲಲಿತಾ ಆಸ್ಪತ್ರೆಯಲ್ಲಿದ್ರೂ ಕೂಡ ನೋಟ್ ಬ್ಯಾನ್ ಆದ ಬಗ್ಗೆ ಅದರಿಂದ ದೇಶದಲ್ಲಾಗುತ್ತಿದ್ದ ಬೆಳವಣಿಗೆಗಳ ಕುರಿತು ಮಾಹಿತಿ ಪಡೆಯುತ್ತಿದ್ದರು.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಪ್ರಥಮ್ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ
ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್
ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!
ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?
ಸಿನಿಮಾ ಥಿಯೇಟರ್ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?