ಅರ್ನಾಬ್ ಅವರ ಕನ್ನಡದ ಕನಸಿಗೆ ಶೆಟ್ಟರ ಸಾಥ್ !

0
12542

R.ಪಬ್ಲಿಕ್ ಕನ್ನಡ ಈಗ ಕನ್ನಡ ಸುದ್ದಿವಾಹಿನಿಯಲ್ಲಿ ಸಂಚಲನ ಮೂಡಿಸಲು ಬರುತ್ತಿರುವ ವಾಹಿನಿ‌. ಅರ್ನಾಬ್ ಎಂಬ ಪತ್ರಿಕೋದ್ಯಮದ ದಿಗ್ಗಜ ಈಗ ಕನ್ನಡಕ್ಕೆ ಕಾಲಿಡುತ್ತಿದ್ದು ಸಹಜವಾಗಿ ಸಾಕಷ್ಟು ನಿರೀಕ್ಷೆಗಳಿವೆ. ಈಗ ಅದಕ್ಕೆ ಮಾಧ್ಯಮ್ ಮಿಂಚು ಜಯಪ್ರಕಾಶ್ ಶೆಟ್ಟಿ ಸಾಥ್ ಕೊಡ್ತಿದ್ದಾರೆ.

ಹೌದು, ಬಿಗ್ 3 ಖ್ಯಾತಿಯ ಜಯಪ್ರಕಾಶ್ ಶೆಟ್ರು ಈಗ R.ಪಬ್ಲಿಕ್ ಕನ್ನಡದ ಸಂಪಾದಕರಾಗಿ ತಮ್ಮ ಹೊಸ ಜರ್ನಿ ಶುರು ಮಾಡಿದ್ದಾರೆ. ಅಧಿಕಾರಿಗಳಿಗೆ ಚಳಿ ಬಿಡಿಸುತ್ತಾ, ನಿದ್ದೆ ಮಾಡುತ್ತಿದ್ದ ಸರ್ಕಾರವನ್ನ ಬಡಿದೆಬ್ಬಿಸಿ , ಜನರ ಕಣ್ಣಿರಿಗೆ ಸಮಸ್ಯಗೆ ಪರಿಹಾರವಾದವರು ಜಯಪ್ರಕಾಶ್ ಶೆಟ್ಟಿ. ಬಿಗ್ ಥ್ರಿ ಬ್ಯ್ರಾಂಡ್ ಆಗಿ ಕರುನಾಡಿನಲ್ಲಿ ಮಿಂಚಿನ ಸಂವಲನ ಮೂಡಿಸಿದ್ದು ಜಯಪ್ರಕಾಶ್ ಶೆಟ್ಟಿ.

ಇನ್ನೂ ಇವರು ಸಮಯ ನ್ಯೂಸ್ ಹಾಗೂ ಸುವರ್ಣ ವಾಹಿನಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಮೀಡಿಯಾ ಜಗತ್ತಿನಲ್ಲಿ ತಮ್ಮದೆ ಆದ ಚಾಪು ಮೂಡಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಇದ್ದರೆ ಇವರ ಹಾಗೇ ಇರಬೇಕು, ಬೆಳಿದರೆ ಇವರ ಹಾಗೇ ಬೆಳಿಯಬೇಕು ಎಂದು ಕನಸು ಕಾಣುವ ಜರ್ನಲಿಸಂ ವಿದ್ಯಾರ್ಥಿಗಳಿಗೆ ಆದರ್ಶ ಗುರುಗಳಿವರು. ಈಗ R.ಪಬ್ಲಿಕ್ ಕನ್ನಡದ ಮೂಲಕ ಮತ್ತೊಂದು ಭರವಸೆಯನ್ನ ಕರುನಾಡ ಜನತೆಯ ಮನದಾಳದಲ್ಲಿ ಮೂಡಿಸಿದ್ದಾರೆ. ಅವರ ಈ ಆಗಮನದಿಂದ ಹೊಸ ದಿನಗಳು ಶುರುವಾಗುತ್ತವೆ ಅನ್ನೊ ನಂಬಿಕೆ ಜನರದ್ದು. ಅದೇ ಸದ್ದಿಗಳನ್ನ ಹಾಕಿ ವೈರಲ್ ನ್ಯೂಸ್ ಗಳಿಂದ ಬೇಸತ್ತಿದ್ದ ಜನತೆಗೆ ಈ ಸಂಪಾದಕರು ಭರವಸೆಯಾಗಿ ಬರುತ್ತಿದ್ದಾರೆ. ಹೀಗಾಗಿ ನಮ್ಮ ಟಿಎನ್ ಐಟಿ ಕಡೆಯಿಂದ ಜಯಪ್ರಕಾಶ್ ಶೆಟ್ಟಿ ಅವರಿಗೆ ಹೃದಯಪೂರ್ವಕ ಸ್ವಾಗತ.