ತಮಿಳುನಾಡಿಗೆ 10 ದಿನಗಳವರೆಗೆ 15 ಸಾವಿರ ಕ್ಯೂಸೆಟ್ ನೀರನ್ನು ಬಿಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ಖಂಡಿಸಿ ಕನ್ನಡ ಒಕ್ಕೂಟ ಸಂಘಟನೆಗಳು ಸೆಪ್ಟೆಂಬರ್ 9ರಂದು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿವೆ. ಸುಪ್ರೀಂಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ಸೋಮವಾರ ರಸ್ತೆ ತಡೆ ನಡೆಸಿದ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಸೆ. 9ರಂದು ಬಂದ್ ನಡೆಸುವುದಾಗಿ ಹೇಳಿದರು.
ಪದೇ ಪದೇ ಜನರಿಗೆ ತೊಂದರೆ ಕೊಡೋಕೆ ನನ್ನ ಮನಸ್ಸು ಇಚ್ಚಿಸುತ್ತಿಲ್ಲ ಆದರೆ ನಮ್ಮ ರಾಜ್ಯಕ್ಕೆ ಅನ್ಯಾಯವಾಗ್ತಾ ಇರೋದು ನಮ್ಮಿಂದ ಸಹಿಸಲು ಆಗುತ್ತಿಲ್ಲ. ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿ ಜೈಲಿಗೆ ಸೇರಲು ಸಿದ್ಧ, ಆದರೆ ತಮಿಳುನಾಡಿಗೆ ಮಾತ್ರ ನೀರು ಬಿಡೆವು. ಕರ್ನಾಟಕ ಬಂದ್ಗೆ ರಾಜ್ಯದ ಎಲ್ಲಾ ಜನರು ಸೂಕ್ತ ರೀತಿಯಲ್ಲಿ ಬೆಂಬಲ ನೀಡಬೇಕೆಂದು ವಾಟಾಳ್ ನಾಗರಾಜ್ ಮನವಿ ಮಾಡಿಕೊಂಡರು.
ಇನ್ನು ಕರ್ನಾಟಕ ಬಂದ್ಗೆ ಈಗಾಗಲೇ ರಾಜ್ಯ ಚಲನ ಚಿತ್ರ ಮಂಡಳಿ ಬೆಂಬಲ ನೀಡುವುದಾಗಿ ಘೋಷಿಸಿದೆ, ಕೋರ್ಟ್ನ ಆಧೇಶ ಹೊರ ಬಿದ್ದ ಬಳಿಕ ಮಂಡ್ಯ, ಶ್ರೀರಂಗ ಪಟ್ಟಣ, ಬೆಳಗೊಳ, ಕೆಆರ್ಎಸ್ ಬಳಿ ಹಲವಾರು ಕನ್ನಡ ಪರ ಸಂಘಟನೆ ಪ್ರತಿಭಟನೆ ನಡೆಸಿವೆ.
POPULAR STORIES :
ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!
ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?