ಈಗ ರೈಲು ಹೊರಡುವ 30 ನಿಮಿಷ ಮೊದಲು ಟಿಕೆಟ್ ಕಾಯ್ದಿರಿಸಬಹುದು..! ರೈಲ್ವೇ ಪರಿಷ್ಕೃತ ನಿಯಮಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ

Date:

ರೈಲಿನಲ್ಲಿ ಪ್ರಯಾಣ ಬೆಳೆಸುವವರು ತಿಳಿಯಲೇ ಬೇಕಾದ ಮಾಹಿತಿ..!
ಏನಪ್ಪಾ ಅಂದ್ರೆ ರೈಲ್ವೇ ತನ್ನ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಿಕೊಂಡಿದೆ..! ಈಗಿನ ರೈಲ್ವೇ ಹೊಸ ನಿಯಮದಂತೆ “ರೈಲು ಹೊರಡುವುದಕ್ಕೂ 30 ನಿಮಿಷ ಮೊದಲೂ ಸಹ ಆನ್ ಲೈನ್ ನಲ್ಲಿ ಟಿಕೇಟ್ ಬುಕ್ ಮಾಡಿ ಸೀಟು ಕಾಯ್ದಿರಸಬಹದು..! ನಿನ್ನೆಯಿಂದಲೇ ಅಂದರೆ ನವೆಂಬರ್ 12ರಿಂದ ಈ ಅವಕಾಶ ಲಭ್ಯವಾಗುತ್ತಿದೆ. ಆದರೆ ಈ ಹೊಸ ನಿಯಮದ ಅನ್ವಯ ಟಿಕೆಟ್ ರದ್ಧತಿ ಶುಲ್ಕವನ್ನು ಎರಡುಪಟ್ಟು ಹೆಚ್ಚಿಸಲಾಗಿದೆ. ರೈಲು ನಿರ್ಗಮಿಸುವುದಕ್ಕಿಂತ ನಾಲ್ಕು ಗಂಟೆ (4ಗಂಟೆ) ಮೊದಲೇ ರೀಫಂಡ್ ಹಣವನ್ನು ಪಡೆದುಕೊಳ್ಳಬೇಕಾಗುತ್ತದೆ. ರೈಲು ನಿರ್ಗಮಿಸಿದ ನಂತರ ಯಾವುದೇ ಕಾರಣಕ್ಕೂ ಆ ಹಣವನ್ನು ವಾಪಸ್ಸು ಕೊಡಲಾಗುವುದಿಲ್ಲವೆಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಮೊದಲೇ ಹೇಳಿರುವಂತೆ ನಿನ್ನೆಯಿಂದಲೇ (ನವೆಂಬರ್ 12) ಈ ಪರಿಷ್ಕೃತ ಹೊಸ ನಿಯಮ ಜಾರಿಗೆ ಬಂದಿದೆ. ಈ ಹೊಸ ನಿಯಮದ ಪ್ರಮುಖ ಅಂಶಗಳು

1. ಈ ಪ್ರಕಾರ ರೈಲು ನಿರ್ಗಮನದ 48 ಗಂಟೆಯೊಳಗೆ 30 ರೂಪಾಯಿಗಳಷ್ಟಿದ್ದ ದ್ವಿತೀಯ ದರ್ಜೆ ಅಥವಾ ಸೆಕೆಂಡ್ ಕ್ಲಾಸ್ ಟಿಕೆಟ್ ರದ್ದತಿ ಶುಲ್ಕ ಎರಡುಪಟ್ಟಿನಷ್ಟು ಹೆಚ್ಚಾಗಿ 60 ರೂಪಾಯಿಗಳಾಗಿವೆ..! ಅಂದರೆ ಸೆಕೆಂಡ್ ಕ್ಲಾಸ್ ಟಿಕೆಟ್ ರದ್ದತಿ ಶುಲ್ಕ 30 ರೂಪಾಯಿಗಳಿಂದ 60 ರೂಪಾಯಿಗಳಿಗೆ ಹೆಚ್ಚಾಗಿದೆ. ಎಸಿ ಟಿಕೆಟ್ ದರ 90 ರೂಪಾಯಿಗಳಿಂದ 180 ರೂಪಾಯಿಗಳಿಗೆ ಏರಿಕೆಯಾಗಿದೆ..!

2. ಸೆಕೆಂಡ್ ಸ್ಲೀಪರ್ ಕ್ಲಾಸಿನ ರದ್ದತಿ ಶುಲ್ಕ 60 ರೂಪಾಯಿಗಳಿಂದ 120 ರೂಪಾಯಿಗಳಿಗೆ ಏರಿಕೆಯಾಗಿದೆ..! ಅದೇರೀತಿ ಸೆಕೆಂಡ್ ಎಸಿ ರದ್ದತಿಯ ಶುಲ್ಕವೂ 100 ರೂಪಾಯಿಯಿಂದ 200 ರೂಪಾಯಿಗಳಿಗೆ ಹೆಚ್ಚಾಗಿದೆ..!

3. ವೇಟಿಂಗ್ ಲಿಸ್ಟ್ ಅಥವಾ ಕಾಯ್ದಿಟ್ಟಿದ್ದ ಮತ್ತು ಆರ್.ಎ.ಸಿ. ಟಿಕೆಟ್ ಗಳ ರೀಫಂಡ್ ಹಣವನ್ನು ರೈಲು ನಿರ್ಗಮಿಸುವ ಅರ್ಧಗಂಟೆ ಮೊದಲು ಪಡೆಯ ತಕ್ಕದ್ದು..! ಇಲ್ಲದೇ ಹೋದರೆ ಹಣ ರೀಫಂಡ್ ಆಗಲ್ಲ..!

4. ರೈಲು ನಿರ್ಗಮನದ 48ಗಂಟೆ ಮತ್ತು 12 ಗಂಟೆಯ ಮೊದಲು ರದ್ದತಿ ಶುಲ್ಕ ಟಿಕೆಟ್ ದರ ಶೇಕಡ 25ರಷ್ಟಿರುತ್ತದೆ..!

5. ರೈಲು ನಿರ್ಗಮನದ 48ಗಂಟೆ ಮತ್ತು 6 ಗಂಟೆಯ ಮೊದಲು ಕೂಡ ರದ್ದತಿ ಶುಲ್ಕ 25% ..! ರೈಲು ನಿರ್ಗಮನದ ಆರುಗಂಟೆಗೆ ಮುಂಚಿತವಾಗಿ, ರೈಲು ನಿರ್ಗಮನವಾಗುವ 2 ಗಂಟೆ ಅವಧಿ ತನಕವೂ ರದ್ದತಿ ಶುಲ್ಕ ಶೇ50..!

ಹೀಗೆ ರೈಲ್ವೇ ಪರಿಷ್ಕೃತ ನಿಯಮದಲ್ಲಿ ಬದಲಾವಣೆ ತರಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ರೀಫಂಡ್ ನಿಯಮದ ಬದಲಾದ ಪಟ್ಟಿ ಈ ಕೆಳಗಿದೆ.

New Refund Rules regarding train ticket cancellation w.e.f. 12 November

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!

ಅಪ್ಪ ಕೊಟ್ಟಿದ್ದು ಹತ್ತು ಲಕ್ಷ, ಇವಳು ಮಾಡಿದ್ದು ಕೋಟಿ ಕೋಟಿ..! ಎಂ.ಬಿ.ಎ ವಿದ್ಯಾರ್ಥಿನಿ ಪ್ರಿಯಾಂಕ ಕೋಟ್ಯಾಧಿಪತಿ ಹೇಗಾದ್ರು ಗೊತ್ತಾ..?!

ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?

ಕನ್ನಡ ನಾಡು, ನುಡಿಯ ಬಗ್ಗೆ ಗೊತ್ತೇ ಇಲ್ಲದವರು ಬೆಂಗಳೂರಲ್ಲೇ ಇದ್ದಾರೆ..! ವರನಟ ಡಾ.ರಾಜಕುಮಾರ್ ಅವರನ್ನೇ ಗುರುತಿಸದವರು ಕನ್ನಡನಾಡಲ್ಲಿದ್ದಾರೆ..!

ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!

ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!

ಅಹಂಕರಾರ, ಹಠಮಾರಿತನ ಕೊಂದ ಪ್ರೀತಿ ಇದು..! ಈ ಸ್ಟೋರಿ ಓದಿದ್ರೆ, ಖಂಡಿತಾ ನೀವು ನಿಮ್ಮ ಪ್ರೀತಿಯನ್ನು, ಸ್ನೇಹವನ್ನೂ ಉಳಿಸಿಕೊಳ್ತೀರ..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!

ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...