ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

Date:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಪೆಟ್ರೋಲ್ ಗೆ ನೂರಾರು ಡಾಲರ್ ಕಡಿಮೆಯಾದಾಗ ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್ ಬೆಲೆ ಇಳಿಸಿ ಅರವತ್ತರ ಹೊಸ್ತಿಲಿಗೆ ತಂದು ನಿಲ್ಲಿಸಿದ್ದ ಕೇಂದ್ರ ಸರ್ಕಾರ, ಇದೀಗ ಅದೇ ಮಾರುಕಟ್ಟೆಯಲ್ಲಿ ಐದಾರು ಡಾಲರ್ ಬೆಲೆಯೇರಿಕೆಯಾಗಿದ್ದೇ ದಿಢೀರ್ ಅಂತ ಪೆಟ್ರೋಲ್ ಗೆ ಮೂರು ರೂಪಾಯಿ ಏಳು ಪೈಸೆ, ಡಿಸೇಲ್ ಗೆ ಒಂದು ರೂಪಾಯಿ ತೊಂಬತ್ತು ಪೈಸೆ ಏರಿಕೆ ಮಾಡಿದೆ. ಈ ಹಿಂದೆ ಒಂದು ಬ್ಯಾರೆಲ್ ಪೆಟ್ರೋಲ್ ಇಪ್ಪತ್ತೆಂಟು ಡಾಲರ್ ಗೆ ಸಿಗುತ್ತಿದ್ದ ವೇಳೆ ಪೆಟ್ರೋಲ್ ಗೆ ಅರವತ್ತೆಂಟು ರೂಪಾಯಿ ನಿಗಧಿ ಮಾಡಿದ್ದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರಿಂ ಕೋರ್ಟ್ ಗೆ ಅಪೀಲು ಹೋಗಲಾಗಿತ್ತು. ಸರ್ಕಾರ, `ಜಗತ್ತಿನಲ್ಲಿ ಆರ್ಥಿಕ ಸಂಕಷ್ಟವಿದೆ. ನಮಗೆ ಅದರ ಎಫೆಕ್ಟ್ ತಟ್ಟಿಲ್ಲ. ಪೆಟ್ರೋಲ್ ದುಡ್ಡಲ್ಲಿ ಬ್ಯಾಲೆನ್ಸ್ ಮಾಡ್ತಾ ಇದ್ದೀವಿ’ ಎಂದು ಸಮರ್ಥನೆ ಮಾಡಿಕೊಂಡಿತ್ತು.

petrol-price-hike

ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ವಿದ್ದಾಗ ಒಂದು ಬ್ಯಾರೆಲ್ ಪೆಟ್ರೋಲ್ ಗೆ ನೂರ ಇಪ್ಪತ್ತೆಂಟು ಡಾಲರ್ ಇತ್ತು. ಅವತ್ತಿಗೆ ನೂರ ಇಪ್ಪತ್ತೆಂಟು ಡಾಲರ್ ತೆತ್ತು ಎಂಬತ್ತು ರೂಪಾಯಿಗೆ ಯುಪಿಎ ಸರ್ಕಾರ ಪೆಟ್ರೋಲ್ ಕೊಡುತ್ತಿದ್ದದ್ದು ಸಣ್ಣ ಸಾಧನೆಯಲ್ಲ..! ಆ ಲೆಕ್ಕದಲ್ಲಿ ನರೇಂದ್ರ ಮೋದಿ ಸರ್ಕಾರ ಒಂದು ಲೀಟರ್ ಪೆಟ್ರೋಲ್ ಗೆ ಹನ್ನೆರಡು ರೂಪಾಯಿಯಿಂದ ಹದಿನಾರು ರೂಪಾಯಿ ನಿಗಧಿ ಮಾಡಬೇಕು. ಆದರೆ `ಯುಪಿಎ ಸರ್ಕಾರಕ್ಕಿಂತ ಇಪ್ಪತ್ತು ರೂಪಾಯಿ ಕಡಿಮೆಗೆ ಪೆಟ್ರೋಲ್ ಕೊಡುತ್ತಿದ್ದೇವೆ’ ಎಂದು ಜನಸಾಮಾನ್ಯರನ್ನು ನಂಬಿಸುವುದರಲ್ಲಿ ಹಾಲಿ ಸರ್ಕಾರ ಯಶಸ್ವಿಯಾಗಿದೆ. ಬುದ್ಧಿವಂತರೆನಿಸಿಕೊಂಡ ಮೋದಿ ಪ್ರಿಯರಿಗೆ ಸತ್ಯ ಗೊತ್ತಿದ್ದರೂ ಕಮ್ಮಕ್ಕ್ ಕಿಮಕ್ಕ್ ಎನ್ನುತ್ತಿಲ್ಲ.

  • ರಾ.ಚಿಂತನ್

POPULAR  STORIES :

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಈ ಬದುಕನ್ನು ಅತಿಭಾವುಕರಾಗಿ ಪ್ರೀತಿಸೋಣ, ಬೇಕಿದ್ದರೆ ಆ ಪ್ರೀತಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಲಿ.!

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...