PUBG ಹುಚ್ಚಿನಿಂದ ರೈಲಿಗೆ ಇಬ್ಬರು ಯುವಕರ ಬಲಿ

Date:

ಇಡೀ ಗೇಮಿಂಗ್​ ಲೋಕ(Gaming World)ದಲ್ಲೇ ಪಬ್​ಜಿ(PUBG) ಕ್ರಿಯೆಟ್​ ಮಾಡಿರೋ ಕ್ರೇಜ್​ ಯಾವ ಗೇಮ್​ ಮಾಡಿಲ್ಲ. ಮಾಡೋದು ಇಲ್ಲ. ಯಾರನ್ನು ಕೇಳಿದರು ಪಬ್​ಜಿ ಅಂತಾರೆ. ಅಷ್ಟರ ಮಟ್ಟಿಗೆ ಈ ಗೇಮ್​ ಎಲ್ಲರನ್ನು ಆವರಿಸಿಕೊಂಡುಬಿಟ್ಟಿದೆ. ಕೆಲ ತಿಂಗಳು ಈ ಪಬ್​​ಜಿ ಗೇಮ್​ ಇಂಡಿಯಾದಲ್ಲಿ ಬ್ಯಾನ್(Ban)​ ಮಾಡಲಾಗಿತ್ತು. 

ಆದರೆ, ಬ್ಯಾನ್​ ತೆಗೆದ ಮೇಲೆ ಮತ್ತೆ ಯುವಜನ(Youths)ತೆ ಈ ಪಬ್​​ಜಿ ಗೇಮ್​ನಲ್ಲಿ ಮುಳುಗಿಹೋಗಿದೆ. ಈ ಹಿಂದೆಯೂ ಪಬ್​ಜಿ ಗೇಮ್​ನಿಂದ ಆದ ಅನಾಹುತ ಒಂದೆರೆಡಲ್ಲ. ಪಬ್​ಜಿ ಆಟವಾಡಲು ಮೊಬೈಲ್(Mobile) ಕೊಡಲಿಲ್ಲ ಅಂತ ತಂದೆಯನ್ನೇ ಕೊಂದ(Murder) ಕಥೆಯನ್ನು ಕೇಳಿದ್ದೇವೆ. ಪಬ್​ಜಿ ಆಡಿ ಹುಚ್ಚಾರಾಗಿ ಆಸ್ಪತ್ರೆ ಸೇರಿರುವುದನ್ನು ನೋಡಿದ್ದೇವೆ. ಈ ಪಬ್​ಜಿ ಆಟದೊಳಗೆ ಮುಳುಗಿದರೆ, ಹೊರಗಿನ ಪ್ರಪಂಚದ ಅರಿವೆ ಇರುವುದಿಲ್ಲ. 100 ಜನರಲ್ಲಿ ಕೊನೆಯದಾಗಿ ಉಳಿದು ವಿನ್ನರ್​.. ವಿನ್ನರ್​..ಚಿಕನ್​ ಡಿನ್ನರ್​(Chicken Dinner).. ಮಾಡುವವರೆಗೂ ಗೇಮ್​ನಿಂದ ಆಚೆ ಬರುವುದಿಲ್ಲ. ಇದೀಗ ಪಬ್​ಜಿ ಗೇಮ್​​ನಿಂದ ಮತ್ತೊಂದು ದುರತವೊಂದು ನಡೆದುಹೋಗಿದೆ. ಹೀಗೆ ಪಬ್‌ಜಿ ಆಡುತ್ತಾ ವಾಕಿಂಗ್(Walking) ಮಾಡುತ್ತಿದ್ದ ವಿದ್ಯಾರ್ಥಿಗಳ(Students) ಮೇಲೆ ರೈಲು(Train) ಹರಿದ ಘಟನೆ ಉತ್ತರ ಪ್ರದೇಶ(Uttar Pradesh) ಮಥುರಾದಲ್ಲಿ ನಡೆದಿದೆ. 

10ನೇ ತರಗತಿ ವಿದ್ಯಾರ್ಥಿಗಳಾದ 18 ವರ್ಷದ ಕಪಿಲ್ ಹಾಗೂ 16 ವರ್ಷ ರಾಹುಲ್ ಇಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆ ಪಬ್‌ಜಿ ಆಟದಲ್ಲಿ ಮುಳುಗಿದ್ದಾರೆ. ವಾಕಿಂಗ್ ದಾರಿ ತಪ್ಪಿದೆ. ಗಮನ ಪಬ್‌ಜಿ ಮೇಲೆ ಹೆಚ್ಚಾಗಿತ್ತು. ಪರಿಣಾಮ ಇಬ್ಬರು ವಿದ್ಯಾರ್ಥಿಗಳ ಮೇಲೆ ರೈಲು ಹರಿದು ಸ್ಥಳದಲ್ಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನಿನ್ನೆ ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆಯಿಂದಲೇ ಆಟ ಆಡಲು ಶುರು ಮಾಡಿಕೊಂಡಿದ್ದರೆ. ವಾಕಿಂಗ್ ವೇಳೆ ಪಬ್‌ಜಿ ಗೇಮ್ ಆಡುತ್ತಾ ಮುಂದೆ ಸಾಗಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ದಿನವಿಡಿ ಪಬ್​ಜಿ ಆಡುತ್ತಿರಲಿಲ್ಲ. ಓದುವುದರಲ್ಲೂ ಮುಂದಿದ್ದರು. ಬಿಡುವು ಸಿಕ್ಕಾಗ ಮಾತ್ರ ಪಬ್​ಜಿ ಆಡುತ್ತಿದ್ದರಂತೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

Share post:

Subscribe

spot_imgspot_img

Popular

More like this
Related

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ- ಸಚಿವ ಬಿ.ಎಸ್.ಸುರೇಶ್

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ- ಸಚಿವ ಬಿ.ಎಸ್.ಸುರೇಶ್ ಬೆಳಗಾವಿ: ಧಾರವಾಡ ಜಿಲ್ಲೆಯ...

ಯಾವ ಪುರುಷಾರ್ಥಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ: ವಿಜಯೇಂದ್ರ ಪ್ರಶ್ನೆ

ಯಾವ ಪುರುಷಾರ್ಥಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ: ವಿಜಯೇಂದ್ರ ಪ್ರಶ್ನೆ ಬೆಳಗಾವಿ: ಮಾನ್ಯ ಮುಖ್ಯಮಂತ್ರಿಗಳೇ,...

ನಮ್ಮ ವಾಕ್ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರ ಕಿತ್ತುಕೊಳ್ಳುತ್ತಿದೆ: ನಿಖಿಲ್ ಕುಮಾರಸ್ವಾಮಿ

ನಮ್ಮ ವಾಕ್ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರ ಕಿತ್ತುಕೊಳ್ಳುತ್ತಿದೆ: ನಿಖಿಲ್...

ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿ: ಕಾಂಗ್ರೆಸ್ ಕುಟುಂಬದವರನ್ನು...