ಸ್ಯಾಂಡಲ್ವುಡ್ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡ್ತಾ ಅಮೋಘ ಪ್ರದರ್ಶನ ಕಾಣ್ತಾ ಇರೋ ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕ ನಟ ರಿಷಬ್ ಶೆಟ್ಟಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೂಲತಃ ಮಂಗಳೂರು ಮೂಲದವರಾದ ರಿಷಬ್ ಶಿವಮೊಗ್ಗ ಮೂಲದ ಪ್ರಗತಿ ಎಂಬುವವರನ್ನು ವರಿಸಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇಂದು ಕುಂದಾಪುರ ಜಿಲ್ಲೆಯ ಕೋಟೇಶ್ವರದ ಅಂಕದ ಕಟ್ಟೆ ಬಳಿಯಿರುವ ಸಹನಾ ಕನ್ವೆನ್ಷನ್ ಹಾಲ್ನಲ್ಲಿ ಸಪ್ತಪದಿ ತುಳಿದಿದ್ದಾರೆ. ಇನ್ನು ಈ ಯುವ ಜೋಡಿಯನ್ನು ಹಾರೈಸಲು ಸ್ಯಾಂಡಲ್ವುಡ್ನ ಅನೇಕ ಗಣ್ಯರು ಭಾಗವಹಿಸಿದ್ದು ಇಲ್ಲಿ ಮುಖ್ಯವಾಗಿತ್ತು. ಅದ್ರಲ್ಲೂ ಮುಖ್ಯವಾಗಿ ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಮದ್ವೇಲಿ ಭಾಗಿಯಾಗಿ ನವ ವಧು ವರರನ್ನು ಹಾರೈಸಿದ್ದು ವಿಷೇಶವಾಗಿತ್ತು. ಇನ್ನುಳಿದಂತೆ ಕಿರಿಕ್ಪಾರ್ಟಿ ಚಿತ್ರದ ನಟ ರಕ್ಷಿತ್ ಶೆಟ್ಟಿ, ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಇಡಿ ಚಿತ್ರ ತಂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ರು.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಶಾಹಿದ್ರನ್ನು ಕೊಲ್ಲಲು ಬಯಸಿದ್ರು ಸಾನಿಯಾ ಯಾಕೆ ಗೊತ್ತಾ..?
ಪ್ರಥಮ್- ರಿಷಿಕಾ ಲಾಂಗ್ ಡ್ರೈವ್ ವೇಳೆ ಸ್ಮಾಲ್ ಆಕ್ಸಿಡೆಂಟ್..! ಮುಂದೇನಾಯ್ತು..?
ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..
ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ
ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!