ಕೆಲವೇ ದಿನಗಳ ಹಿಂದೆ ರಾಜಸ್ಥಾನದ ಜೋಧ್ಪುರ ನ್ಯಾಯಲಯ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಕೃಷ್ಣ ಮೃಗ ಬೇಟೆಯಿಂದ ನಿರ್ಧೂಷಿ ಎಂದು ಹೇಳಿದ್ದು, ಅದೇ ಪ್ರಕರಣ ಈಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಸಲ್ಮಾನ್ಖಾನ್ ಗಾಡಿ ಓಡಿಸುತ್ತಾ ಇರುವಾಗಲೇ ಚಿಗರೆ ಮೇಲೆ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ಕಂಡಿದ್ದೇನೆ ಎಂದು ಸಲ್ಮಾನ್ ಜೀಪ್ ಚಾಲಕ ಹರೀಶ್ ದುಲಾನಿ ಸುದ್ದಿವಾಹಿನಿಯೊಂದರ ಸಂದರ್ಶನದ ವೇಳೆ ಬಾಯ್ಬಿಟ್ಟಿದ್ದಾನೆ.
ಚಾಲಕ ಹರೀಶ್ ದುಲಾನಿ ಈ ಪ್ರಕರಣದ ಸಾಕ್ಷಿದಾರನಾಗಿದ್ದು, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ತಾನು ತಲೆಮರೆಸಿಕೊಳ್ಳಬೇಕಾಯಿತು. ಆದ್ದರಿಂದಲೇ ನಾನು ನ್ಯಾಯಾಲಯದ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ ಈಗಲೂ ಸಹ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವುದಾದರೆ ಈಗಲೂ ನಾನು ನ್ಯಾಯಾಲಯದಲ್ಲಿ ಸತ್ಯ ಹೇಳಲು ಹಿಂಜರಿಯುವುದಿಲ್ಲ ಎಂದಿದ್ದಾರೆ.
ಪ್ರಕರಣದ ಬಳಿಕ ದುಲಾನಿಯವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.ಜೀವನ ನಿರ್ವಹಣೆಗೆ ಬೇರೆ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತರುವಾಗ ಕೆಲವು ಗೂಂಡಾಗಳು ನನಗೆ ಬೆದರಿಕೆ ಹಾಕುತ್ತಿದ್ದರು ಎಂದರು. ಇದರಿಂದ ಸಾಕಷ್ಟು ನೊಂದಿದ್ದು ತನ್ನ ಹೆಸರನ್ನು ಸ್ಥಳವನ್ನು ಬದಲಾಯಿಸಿಕೊಂಡಿದ್ದೇನೆ, ಇನ್ನೂ ಕೆಲವು ಬಾರಿ ತನ್ನ ವೇಷವನ್ನೇ ಬದಲಾಯಿಸಿಕೊಂಡು ಕೆಲಸಕ್ಕೆ ಹೋಗುತ್ತಿದ್ದೆ ಎಂದಿದ್ದಾರೆ.
ಸಲ್ಮಾನ್ ಅವರ ಮೇಲೆ ಕೃಷ್ಣ ಮೃಗ ಬೇಟೆ ಹಾಗೂ ಶಸ್ತ್ರಾಸ್ತ ಕಾಯ್ದೆಯ ಎರಡು ಪ್ರಕರಣಗಳು ಇವರ ಮೇಲಿದ್ದು, ಕಳೆದ ವಾರ ನ್ಯಾಯಾಲಯ ಸಲ್ಮಾನ್ ನಿರ್ದೂಷಿ ಎಂದು ತೀರ್ಪು ಹೊರಡಿಸಿತ್ತು.
POPULAR STORIES :
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್ಬುಕ್ನ್ನೇ ಹಿಂದಿಕ್ಕಿದ ಪೋಕಿಮನ್ಗೋ ಗೇಮ್..!!
ಬೋರ್ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!