ಶೈಲಪುತ್ರಿಯ ಬಗ್ಗೆ ನಿಮಗೇಷ್ಟು ಗೊತ್ತು ?

Date:

ನವರಾತ್ರಿ ವೈಭವ ಆರಂಭ ಆಗೇ ಬಿಡ್ತು . ಪ್ರಥಮ ದಿನ ನವರಾತ್ರಿಯಂದು ಶೈಲಪುತ್ರಿಯನ್ನ ಪೂಜಿಸುತ್ತಾರೆ .

ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವೇ ನವರಾತ್ರಿ .  ನವರಾತ್ರಿಯ ಈ ದಿನಗಳಲ್ಲಿ ದುರ್ಗಾಮಾತೆಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ . ಒಂಬತ್ತು ದಿನಗಳಲ್ಲಿ ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ.ದಕ್ಷನ ಪುತ್ರಿಯಾಗಿದ್ದ ಸತಿದೇವಿಯು ಶಿವನನ್ನ ಮದುವೆ ಆಗ್ತಾಳೆ . ಅದು ದಕ್ಷಪ್ರಜಾಪತಿಗೆ ಇಷ್ಟವಿರುವುದಿಲ್ಲ . ಒಂದು ದಿನ ದಕ್ಷಪ್ರಜಾಪತಿ ಯಜ್ಞ ಮಾಡುವಾಗ ಸತಿದೇವಿ ತವರು ಮನೆಗೆ ಬರುತ್ತಾಳೆ . ಆದರೆ ಅಲ್ಲಿ ಅವಳಿಗೆ ಅವಮಾನಿಸಲಾಗುತ್ತೆ . ಕುಪಿತಗೊಂಡ ಸತಿಯು ಹೋಮಕುಂಡದಲ್ಲಿ ಬಿದ್ದು ಬಿಡುತ್ತಾಳೆ . ಶಿವನಿಂದ ದೂರವಾದ ಸತಿ  ಪರ್ವತರಾಜನ ಪುತ್ರಿಯಾಗಿ ಜನಿಸಿ ಶಿವನನ್ನ ವಿವಾಹವಾಗುತ್ತಾಳೆ . ಶೈಲಪುತ್ಪರಿಯು ಪರ್ವತರಾಜನ ಪುತ್ರಿ . ಪರ್ವತ ಅಂದರೆ ಪ್ರಕೃತಿ . ಪ್ರಕೃತಿಯೇ ತಾನಾಗುವ ಹೆಣ್ಣಿನ ಗುಣ, ಪ್ರಕೃತಿಯನ್ನು ಪ್ರೀತಿಸಿ, ಪೂಜಿಸುವ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವ ಗುಣವನ್ನು ಈಕೆಯಲ್ಲಿ ಕಾಣಬಹುದು.

ಶೈಲಪುತ್ರಿಯು ಬಿಳಿ ವಸ್ತ್ರದಲ್ಲಿ ಇರುತ್ತಾಳೆ . ಈಕೆಯನ್ನ ಬಿಳಿ ಹೂಗಳಿಂದ ಪೂಜಿಸುತ್ತಾರೆ . ಶೈಲಪುತ್ರಿಗೆ ಹಾಲಿನಿಂದ ಮಾಡಿದ ಸಿಹಿ ಪದಾರ್ಥಗಳು ತುಂಬಾ ಇಷ್ಟ . ಹೀಗಾಗಿ ಹಾಲಿನಿಂದ ಸಿಹಿ ಪದಾರ್ಥ ಮಾಡಿ ನೈವೇದ್ಯ ಮಾಡುತ್ತಾರೆ .

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...