ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್' ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

Date:

ಹಸಿದ ಮಗು.., ಬದುಕಿರುವ ಶವದಂತಿರುವ ಮಗುವನ್ನು ಎತ್ತಿಕೊಂಡಿರುವ ತಾಯಿ, ವಯಸ್ಸಾದ ಕಾಲಿಲ್ಲದ ವ್ಯಕ್ತಿ…! ಹೀಗೆ ನಾನಾ ಬಗೆಯ ಜನರನ್ನು ಟ್ರಾಫಿಕ್ ಸಿಂಗ್ನಲ್ ಗಳಲ್ಲಿ ನೋಡ್ತಾನೇ ಇರ್ತೀವಿ..!  ಇವರನ್ನು ಭಿಕ್ಷುಕರು ಅಂತ ಕರೀತೀವಿ…! ಇವರಲ್ಲಿ ಕೆಲವರನ್ನು ನೋಡಿದ್ರಂತೂ ಎಂಥವರ ಮನವೂ ಕರುಗುತ್ತೆ..! ಚಿಲ್ಲರೆ ಹಾಕ್ತೀವಿ..! ಕೆಲವೊಮ್ಮೆ ಇಲ್ಲ ಅಂತ ಹೇಳಿ ಕಳಿಸಿದರೂ, ಬಹುತೇಕರಿಗೆ ನಾವೆಲ್ಲಾ ಭಿಕ್ಷೆ ಹಾಕಿಯೇ ಹಾಕಿರುತ್ತೇವೆ..! ನಾನಂತು ಇನ್ಮುಂದೆ ಭಿಕ್ಷೆ ಹಾಕಲ್ಲ… ಹಾಕಲ್ಲ.. ಹಾಕಲ್ಲ..! ಈ ಸ್ಟೋರಿ ಓದಿದ ಮೇಲೆ ನೀವು ಕೂಡ ನಾನು ತೆಗೆದುಕೊಂಡ ನಿರ್ಧಾರವನ್ನೇ ತಗೊಳ್ತೀರಿ..! ಓಕೆ, ಮೊದಲು ಸ್ಟೋರಿ ಓದಿ.
ಆ ಹುಡುಗಿ ಹೆಸರು `ಇಂದು’. ಅವಳ ಮನೆಯಲ್ಲಿ ಬಡತನ ಇದ್ದರೂ ತಂದೆ ತಾಯಿ ಅವಳನ್ನು ಕಷ್ಟಪಟ್ಟು ಓದಿಸ್ತಾ ಇದ್ರು..! ಅವಳ ಓದಿಗಾಗಿಯೇ ಹಣವನ್ನು ಕಷ್ಟಪಟ್ಟು ಕೂಡಿಡ್ತಾ ಇದ್ರು..! ಅವಳು ಕೇಳಿದ್ದಕ್ಕೆಲ್ಲಾ ಯಸ್ ಅಂತಿದ್ರು..! ಅವಳ ತಂದೆ ಅವಳನ್ನು ಉದ್ಯಮಿ ಮಾಡ್ಬೇಕು ಅಂತ ಕನಸನ್ನು ಕಂಡಿದ್ರು..! ತಾನು ನಡೆಸುತ್ತಿದ್ದ ಸಣ್ಣ ಅಂಗಡಿಯಿಂದ ಬರುತ್ತಿದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಇವಳಿಗಾಗಿಯೇ ಕೂಡಿಡ್ತಿದ್ರು..! ಆದರೆ ಈ ಮಗಳು ಅಪ್ಪ-ಅಮ್ಮನ ಆಸೆಗೆ ತಣ್ಣೀರು ಎರಚಿ ಯಾವನೋ ಒಬ್ಬನ ಜೊತೆ ಓಡಿ ಹೋಗಿ ಬಿಟ್ಟಳು..! ಆಕೆ ಓಡಿ ಹೋಗಿದ್ದು ಯಾರ ಜೊತೆ ಗೊತ್ತಾ..?! ಅವಳಿಗೆ ಸ್ಯಾಮಸ್ಯಾಂಗ್ ಗ್ಯಾಲಾಕ್ಸಿ ಮೊಬೈಲ್ ಕೊಡಿಸಿದ್ದ ಹುಡುಗನೊಬ್ಬನ ಜೊತೆ..! ಅವಳ ಲೆಕ್ಕಾಚಾರದಲ್ಲಿ ಆತ ನನ್ನ ಪ್ರಿಯತಮ, ಅದಕ್ಕಾಗಿ ನನಗೆ ಅಷ್ಟೊಂದು ಒಳ್ಳೆಯ ಮೊಬೈಲ್ ಕೊಡಿಸಿದ್ದಾನೆಂದು..! ಅವಳ ಯೋಚನೆ ತಪ್ಪಾಗಿತ್ತು..! ಆ ಹುಡುಗನ ಜೊತೆ ಓಡಿ ಹೋಗಿ ತಪ್ಪು ಮಾಡಿ ಬಿಟ್ಟಿದ್ಲು..! ಇಂಥಾ ಮೊಬೈಲ್ ಕೊಡಿಸಿ.., ಆಸೆ ಹುಟ್ಟಿಸಿ ಕರ್ಕೊಂಡು ಹೋಗಿ.. ಭಿಕ್ಷೆ ಬೇಡೋಕೆ ಹಚ್ಚುವ ದೊಡ್ಡ ಜಾಲವೇ ಇದೆ..! ವಯಸ್ಸಿಗೆ ಬಂದಾಗಾ ಸಾಮಾನ್ಯವಾಗಿ ಈ ಪ್ರೀತಿ-ಗೀತಿ ಇತ್ಯಾದಿ ಇತ್ಯಾದಿ ಹುಚ್ಚು ಹೆಚ್ಚಾಗುವುದು ಕಾಮನ್..! ಇದನ್ನೇ ಬಂಡವಾಳವಾಗಿಸಿಕೊಂಡು ಹೆಣ್ಣುಮಕ್ಕಳ ದಾರಿ ತಪ್ಪಿಸುವರಿದ್ದಾರೆ..! ಭಿಕ್ಷಾಟನೆ ಒಂದು ಉದ್ಯಮವಾಗಿದೆ. ಇವೆಲ್ಲಾ ಆ `ಇಂದು’ಗೆ ಅರ್ಥವಾಗುವಷ್ಟರಲ್ಲಿ ಆಕೆ..ಈಗ ಎಲ್ಲಿದ್ದಾಳೋ..! ಇದು ಕಟ್ಟುಕತೆಯಲ್ಲ. ಈ ಬಗ್ಗೆ ಅನಂತ ಶರ್ಮಾ ಎಂಬ ಬರಹಗಾರರೊಬ್ಬರು ಇಂಗ್ಲೀಷ್ ಭಾಷೆಯ ವೆಬ್ ಪೋರ್ಟಲ್ ಒಂದರಲ್ಲಿ ಬರೆದಿದ್ದಾರೆ. ಈ `ಇಂದು’ ಬೇರೆ ಯಾರೂ ಅಲ್ಲ. ಬರಹಗಾರ್ತಿಯ ಸಹಾಯಕಿ `ಸವಿತಾ’ರ ಮಗಳಂತೆ..!
ಕಳೆದ ಭಾನುವಾರ ಬೆಳಿಗ್ಗೆ ಬೆಳಿಗ್ಗೇನೆ ಸವಿತಾ ಇವರ ಬಳಿಯಲ್ಲಿ ಎಲ್ಲಾ ವಿಚಾರವನ್ನು ಹೇಳಿ ಅತ್ತರು. ಇವರಿಗೆ ಸಮಾಧಾನ ಮಾಡಿ, ಯಾವುದೋ ಕೆಲಸದ ಮೇಲೆ ಹೊರ ಹೋಗ್ತಾರೆ. ಆಗ ಮತ್ತೊಂದು ಘಟನೆ ನಡೆಯುತ್ತಂತೆ..! ಕ್ಯಾಬ್ ಬುಕ್ ಮಾಡೋಕೆ ಆಗದೇ ಇದ್ದಿದ್ದರಿಂದ ಆಟೋದಲ್ಲಿ ಹೋಗ್ತಾರೆ. ಆಗ ಟ್ರಾಫಿಕ್ ಸಿಗ್ನಲ್ ನಲ್ಲಿ ಆಟೋ ನಿಂತಾಗ ಒಬ್ಬ ಹುಡುಗ ಬಂದು ಇವರ ಕಾಲಿಗೆ ಬೀಳ್ತಾನೆ..! ಭಿಕ್ಷೆ ಹಾಕಿ ಅಂತ ಬೇಡ್ತಾನೆ..! ಮನೆಯಲ್ಲಿ ತನ್ನ ಸಹಾಯಕಿಯ ಮಗಳ ಕತೆಯನ್ನು ಕೇಳ್ಕೊಂಡು ಬಂದಿದ್ದ ಇವರಿಗೆ ಭಿಕ್ಷೆ ಹಾಕ್ಬೇಕು ಅಂತ ಅನಿಸಲ್ಲ..! “ನೀನು ಇನ್ನೊಮ್ಮೆ ಕಾಲಿಗೆ ಬಿದ್ರೆ ಪೊಲೀಸ್ ಗೆ ಕಂಪ್ಲೆಂಟ್ ಮಾಡ್ತೀನಿ’ ಅಂತ ಹೇಳ್ತಾರೆ..! ಅದಕ್ಕೂ ತಲೆಕೆಡಿಸಿಕೊಳ್ಳದ ಹುಡುಗ ಮತ್ತೆ ಮತ್ತೆ ಕಾಲಿಗೆ ಬೀಳ್ತಾನೆ..! ಆಗ ಅವರು ದಾರಿಯಲ್ಲಿ ತಿನ್ನೋಕೆ ಅಂತ ಇಟ್ಕೊಂಡಿದ್ದ `ಸ್ಯಾಂಡ್ವಿಚ್’ ಅನ್ನು ಆ ಹುಡುಗನಿಗೆ ಕೊಡ್ತಾರೆ..! ದುಡ್ಡು ಕೊಟ್ರೆ ಆ ಹುಡುಗನ ಮ್ಯಾನೇಜರ್ ಗೆ ಹೋಗುತ್ತೆ..! ಇದನ್ನು ಕೊಟ್ಟರೆ ಪಾಪ, ಆ ಹುಡುಗ ತಿನ್ತಾನೆ ಅನ್ನೋ ಕಾರಣಕ್ಕಾಗಿ ಚಿಲ್ಲರೆ ಕೊಡೊ ಬದಲು `ಸ್ಯಾಂಡ್ವಿಚ್’ ಕೊಡ್ತಾರೆ..! ಆದ್ರೆ ಆ ಹುಡುಗ ಅದನ್ನ ಏನ್ ಮಾಡ್ತಾನೆ ಗೊತ್ತಾ..?! ಅಲ್ಲೇ ಪಕ್ಕದಲ್ಲಿದ್ದ ಎಟಿಎಂ ಹತ್ತಿರ ಹೋಗಿ ಎಸೆಯುತ್ತಾನಂತೆ..! ಅಷ್ಟೇ ಅಲ್ಲದೇ ಆತ ಡ್ರಗ್ಸ್ ಕೂಡ ಹೀರುತ್ತಾ ನಿಲ್ತಾನಂತೆ..!
ದಯವಿಟ್ಟು ಭಿಕ್ಷೆ ಹಾಕೋಕೆ ಹೋಗ್ಬೇಡಿ ಸಾರ್. ದುಡ್ಡು ಕೊಡಬೇಕು ಅನ್ನಿಸಿದ್ರೆ ಅನಾಥಶ್ರಮಕ್ಕೋ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೋ ಕೊಡಿ..! ಬಡವರ ಕಷ್ಟವನ್ನೇ, ಆಸೆಯನ್ನೇ ಬಂಡವಾಳವಾಗಿಸಿಕೊಂಡ ಒಂದಿಷ್ಟು ಜನ ಭಿಕ್ಷೆ ಬೇಡುವುದನ್ನು ಉದ್ಯಮವನ್ನಾಗಿಸಿ ಕೊಂಡಿದ್ದಾರೆ..!
ಸ್ಟೋರಿ ಓದಿದ್ರಲ್ಲಾ.. ಇನ್ಮುಂದೆ ಭಿಕ್ಷೆ ಹಾಕ್ತೀರಾ..!?

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಭಾರತದ ಕಿರಿಯ ಪಿ.ಎಚ್.ಡಿ. ಸ್ಟೂಡೆಂಟ್ `ಸುಷ್ಮಾ ವರ್ಮಾ..’! 15 ವರ್ಷದ ಈ ಬಾಲಕಿಯ ಅಪ್ಪ ದಿನಗೂಲಿ ಕಾರ್ಮಿಕರು ಇವಳು ಪಿ.ಎಚ್.ಡಿ. ಸ್ಟೂಡೆಂಟ್..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ಆಸ್ಟ್ರೇಲಿಯಾದ ಅಡಿಲೇಡ್ ನ ದೊಡ್ಡ ಸಾಫ್ಟ್ ವೇರ್ ಕಂಪನಿಯ ಕೆಲಸ ಬಿಟ್ಟು ಬಂದು ರೈತನಾದ..! ಅಷ್ಟಕ್ಕೂ ಸಾಫ್ಟ್ ವೇರ್ ಕೆಲಸ ಯಾಕೆ ಬಿಟ್ರು ಗೊತ್ತಾ..?

ತನಗಿಂತ ಮೂರು ವರ್ಷ ಚಿಕ್ಕವನಾದ ಹುಡುಗನ್ನು ಪ್ರೀತಿಸಿ ಮದುವೆಯಾದಳು..!

ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

 ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

 ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ..

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...