ಸೈಲೆಂಟ್ ಸುನಿಲ್ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು ?

Date:

ಸೈಲೆಂಟ್ ಸುನಿಲ್ ಒಬ್ಬ ಕುಖ್ಯಾತ, ಸರ್ಚ್ ವಾರೆಂಟ್ನಲ್ಲಿರೋ ರೌಡಿ. ಅಂತಹವನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಳ್ಳುವುದು ಸರಿನಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಬಗ್ಗೆ KR ಪೇಟೆಯ ಹೆಲಿಪ್ಯಾಡ್ನಲ್ಲಿ ಮಾತ್ನಾಡಿದ ಅವರು, ಸರ್ಚ್ ವಾರೆಂಟ್ನಲ್ಲಿರುವ ರೌಡಿ ಸೈಲೆಂಟ್ ಸುನಿಲ್ ಜೊತೆಗೆ ಇಬ್ಬರು ಎಂಪಿ, BJP ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಗೊತ್ತಿದ್ದು ಗೊತ್ತಿದ್ದು ರೌಡಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಬೇರೆ. ಅದನ್ನ ಕೇಳಿದ್ರೆ ಕಾಂಗ್ರೆಸ್ನಲ್ಲೂ ಇದ್ದಾರೆ ನೋಡಿ ಅನ್ನೋದು ಎಷ್ಟು ಸರಿ. ಬಿಜೆಪಿಯವರಿಗೆ ಅಂಟು ರೋಗ ಅಂಟಿದೆ. ಅದರಲ್ಲೂ ಸಿಎಂ ಬೊಮ್ಮಾಯಿಗೆ ಆ ರೋಗ ಜಾಸ್ತಿ. ಹಿಂದಿನ ಅಧಿಕಾರದಲ್ಲಿ.. ಕಾಂಗ್ರೆಸ್ಸಿನಲ್ಲಿ.. ಹೀಗೆ ಎಲ್ಲದಕ್ಕೂ ಬೊಟ್ಟು ಮಾಡ್ತಾರೆ. ಮೊದಲು ನಿಮ್ಮ ತಪ್ಪುಗಳನ್ನ ಹೇಳ್ರಯ್ಯ.. ನೀವೇನು ಮಾಡಿದ್ರಿ ಅಂತ ಹೇಳಿ. ಹೆಸರಲ್ಲೇ ಫೈಟರ್ ರವಿ ಬಗ್ಗೆ ಗೊತ್ತಾಗ್ತಿದೆ. ಅಶಾಂತಿ ನಿರ್ಮಾಣ ಮಾಡಲು BJPಯವರಿಗೆ ಇಂತಹವರು ಬೇಕಲ್ಲ. ಇನ್ನ ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದವರು ಎಂಬ ಆರೋಪ ವಿಚಾರ, ಅಮಿತ್ ಶಾ ಎಲ್ಲೋಗಿದ್ರು. ಏನು ಮಾವನ ಮನೆಗೆ ಹೋಗಿದ್ರಾ. ಅಮಿತ್ ಶಾಗೆ 3 ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು. ಅವರೇ ಹೋಂ ಮಿನಿಸ್ಟರ್ ಆಗಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಆಗಿರಲಿಲ್ವಾ. ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಆಗಿತ್ತಷ್ಟೇ. ನಲಪಾಡ್ ರೌಡಿ ಅಲ್ಲ, ರೌಡಿ ಶೀಟರ್ ಕೂಡ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...