ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಕಾವೇರಿ ನದಿಗೆ ಇಳಿಯಲು ನಿರ್ಬಂಧಿಸಲಾಗಿದೆ. ಆದ್ರೂ ಸರ್ಕಾರದ ಆದೇಶಕ್ಕೆ ಕ್ಯಾತ ಎನ್ನದ ಪ್ರವಾಸಿಗರು ನದಿಗೆ ಇಳಿದು ಅಪಾರಕ್ಕೆ ಆಹ್ವಾನ ನೀಡ್ತಿದ್ದಾರೆ.
ರಭಸವಾಗಿ ಹರಿಯುವ ನೀರಿನ ಮಧ್ಯಭಾಗಕ್ಕೆ ಮಕ್ಕಳೊಂದಿಗೆ ತೆರಳಿ ಸೆಲ್ಫಿ ತೆಗೆದುಕೊಳ್ತಿದ್ದಾರೆ. ಜೊತೆಗೇ ಅಲ್ಲೇ ಬಂಡೆ ಕಲ್ಲುಗಳ ಮೇಲೆ ಕುಳಿತು ಊಟ ಮಾಡ್ತಿದ್ದಾರೆ. ಒಂದು ವೇಳೆ ಕಾಲು ಜಾರಿದ್ರೆ ಮಕ್ಕಳು, ಪ್ರವಾಸಿಗರು ನೀರು ಪಾಲಾಗುವ ಅಪಾಯವಿದೆ. ಹೀಗಿದ್ದರೂ ನದಿಗೆ ಇಳಿದು ಸೆಲ್ಫಿ ತೆಗೆದುಕೊಳ್ತಿದ್ದರೂ ಕೊಳ್ಳೇಗಾಲ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ.