ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?

Date:

ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮನಂತೆ ಇದೆಯಲ್ಲಾ..? ವಾವ್ಹ್ ಸೂಪರ್.., ಎಲ್ಲಿ ವೀಡೀಯೋ ಮಾಡಿಕೊಂಡು ಬಂದ್ರೀ..? ಕಾಶ್ಮೀರಕ್ಕೋ, ಹಿಮಾಲಯಕ್ಕೋ ಹೋಗಿದ್ರಾ..? ಸಾರ್, ನಮಗೂ ಹೇಳಿದ್ರೆ ನಿಮ್ ಜೊತೆ ನಾವೂ ಅಲ್ಲಿಗೆ ಬರ್ತಾ ಇದ್ವಿ..! ಅಮೇಜಿಂಗ್ ಪ್ಲೇಸ್ ಅಲ್ವಾ..? ಆ ಮಂಜು ತಣ್ಣಗೆ ಮೈ ಸೋಕ್ತಾ ಇದ್ರೆ.. ಆಹ್ಹಾ.. ಚಳಿಯಲ್ಲೂ ಅದೆಂಥಾ ಹಿತ ಅನಿಸುತ್ತಲ್ವಾ ಸಾರ್..! ಮಜಾ ಮಾಡಿರ್ತೀರಾ ಬಿಡಿ.. ಹೇಗಿತ್ತು ಸಾರ್ ಕಾಶ್ಮೀರ್ ಅಥವಾ ಹಿಮಾಲಯದ ಪ್ರವಾಸ..? ಅಂತ ಕೇಳ್ತಾ ಇದ್ದೀರಾ,..?

ಈ ವೀಡೀಯೋ ನೋಡಿ..!

Click Here to watch video :

https://www.youtube.com/watch?v=cuunhcSMt2U
ಅಯ್ಯೋ ಗುರೂ, ನಾವು ಕಾಶ್ಮೀರಕ್ಕೂ ಹೋಗ್ಲಿಲ್ಲ, ಹಿಮಾಲಯಕ್ಕೂ ಹೋಗ್ಲಿಲ್ಲ..! ಇಂಥಹ ಸುಂದರ, ಅತಿ ಸುಂದರ ಬಿಳಿಯ ನೊರೆಯ ಬುಗ್ಗೆಯನ್ನು ನೋಡಿ ಕಣ್ ತಂಪು ಮಾಡಿಕೊಳ್ಳೋಕೆ ನಾವು ಅಷ್ಟೊಂದು ದೂರ ಹೋಗ್ಬೇಕಾ..? ಬೇಡ್ವೇ ಬೇಡ ಸಾರ್… ಇಷ್ಟೊಂದು ಸಖತ್ ಆಗಿರೋ ಪ್ಲೇಸ್ ನಮ್ ಬೆಂಗಳೂರಿನಲ್ಲೇ ಇದೆ..! ನೀವಿನ್ನೂ ಹೋಗ್ಲಿಲ್ವಾ..? ಏನ್ ಬಾಸ್ ನೀವು ಬೆಂಗಳೂರಲ್ಲೇ ಇರ್ತೀರಿ, ಆದ್ರೂ ಈ ಅಮೇಜಿಂಗ್ ಪ್ಲೇಸ್ ಗೆ ಹೋಗಿಲ್ಲ ಅಂದ್ರೆ..?! ಇನ್ನಾದ್ರೂ ಒಂದ್ಸಲ ಈ ಸ್ವರ್ಗ ಲೋಕಕ್ಕೆ ಹೋಗಿಬನ್ನಿ..! ಈ ಪ್ಲೇಸ್ ಯಾವುದು..? ಇಲ್ಲಿನ ಬಿಳಿಯ ನೊರೆಗೆ ಸೌಂದರ್ಯಕ್ಕೆ ಕಾರಣವಾದ್ರೂ ಏನೆಂದು ಹೇಳ್ತೀವಿ..! ಆಮೇಲೆ ಹೋಗ್ಬೇಕು ಅಂತ ಅನಿಸಿದ್ರೆ ಹೋಗಿ ಬನ್ನಿ..!
ಈ ಪ್ಲೇಸ್ ಬೇರೆ ಯಾವುದೂ ಅಲ್ಲ ನಮ್ ಬೆಂಗಳೂರ “ಬೆಳಂದೂರ್ ಲೇಕ್”..! ಹ್ಞಾಂ ಸಾರ್ ನಮ್ ಬೆಳಂದೂರ್ ಲೇಕೇ..! ಆದ್ರೆ ನೀವು ಅಂದು ಕೊಂಡಿರೋ ತರ ಇದು ಮಂಜು ಕರಗಿ ಬೀಳ್ತಾ ಇರೋದಲ್ಲ…! ಇದು “ಟಾಕ್ಸಿಕ್ ಫೋಮ್” ಅಥವಾ ವಿಷಕಾರಿಯಾದ ನೊರೆ ಬುಗ್ಗೆ..! ಹಿಮಾಲಯದಲ್ಲಿ ಹಿಮ ಕರಗಿದಂತೆ, ಕಾಶ್ಮೀರದಲ್ಲಿ ಮಂಜಿನ ಸೌಂದರ್ಯ ಕಣ್ಣಿಗೆ ರಾಚುವಂತೆ ಕಾಣೋ ಇದು ವಿಷಕಾರಿ ಫೋಮ್ ಅನ್ನೋದೇ ಆಘಾತಕಾರಿ..!
ನಗರದ ಆಗ್ನೇಯ ಭಾಗದಲ್ಲಿರುವ ಈ ಕೆರೆ 9000 ಎಕರೆ ವಿಸ್ತೀರ್ಣವಿದ್ದು, ಈ ಹಿಂದೆಯೂ ಇಲ್ಲಿ ಇದೇ ರೀತಿಯ ಬಿಳಿಯ ರತ್ನನೊರೆ ಕಾಣಿ ಕೊಂಡಿತ್ತು..! ಈಗ ಮತ್ತೆ ಕಾಣಿಸಿ ಕೊಂಡಿದೆ..! ವೀಡಿಯೋದಲ್ಲಿರುವಂತೆ ಸೇತುವೆ ದಾಟಲೂ ಕಷ್ಟ ಆಗ್ತಾ ಇದೆ..! ಈ ನೊರೆಯಲ್ಲಿ ಆಟ ಆಡುವುದು ತುಂಬಾ ಡೇಂಜರ್..! ಇದು ಕೈಗಾರಿಕಾ ತ್ಯಾಜ್ಯಗಳಿಂದ ಉಂಟಾಗುವ ಅಪಾಯಕಾರಿ ನೊರೆ..!
ಅಲ್ಲಾ ಸ್ವಾಮಿ ಬೆಂಗಳೂರ್ ಕ್ಲೀನ್ ಸಿಟಿ, ಸಿಲಿಕಾನ್ ಸಿಟಿ, ಇದರಷ್ಟು ನೀಟ್ ಯಾವುದೂ ಇಲ್ಲ.. ಅಂತೆಲ್ಲಾ ಜಂಬ ಕೊಚ್ಚಿ ಕೊಳ್ತೀವಿ..! ರೀ ಇದೆಂಥಾ ಸ್ವಚ್ಛ ಬೆಂಗಳೂರ್ರೀ..? ನೀವು ಈ ವಿಡೀಯೋ ನೋಡಿ ಬೆಳಂದೂರು ಲೇಕ್ ಗೆ ಹೋಗ್ತೀರೋ ಬಿಡ್ತೀರೋ ಗೊತ್ತಿಲ್ಲ..! ಹೋದ್ರೆ ಆರೋಗ್ಯ ಹಾಳಾದ್ರೆ ನಾವು ಜವಬ್ದಾರಲ್ಲ..! ಆದ್ರೆ ಒಂದಂತೂ ಮಾಡಿ, ನಮ್ ಸರ್ಕಾರಕ್ಕೆ ಉಗಿದು ಉಪ್ಪಿನಕಾಯಿ ಹಾಕೋದನ್ನು ಮರೆಯ ಬೇಡಿ..! ಬೆಂಗಳೂರಲ್ಲಿ ಒಂದ್ ಕಾಲದಲ್ಲಿ 280ಕ್ಕೂ ಹೆಚ್ಚು ಸರೋವರಗಳಿದ್ವಂತೆ..! ಆದ್ರೆ ಇವತ್ತು ನೆಟ್ಟಗೆ ಇಪ್ಪತ್ತೂ ಇಲ್ಲ..! ಇರೋದನ್ನು ಉಳಿಸಿಕೊಳ್ಳೋಕು ಆಗಲ್ಲ..ಅಂದ್ರೆ ಶೇಮ್, ಶೇಮ್ ಶೇಮ್

https://www.youtube.com/watch?v=cuunhcSMt2U

 

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಸದ್ಯದಲ್ಲೇ ನಿಮ್ಮನ್ನು ತಲುಪಲಿದೆ `ಬೆಂಗಳೂರು ಡೇಸ್’

ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?

ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?

ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!

ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...