ಸೋನಿ ಆಚಾರ್ಯ ಸಾರಥ್ಯದಲ್ಲಿ ಮತ್ತೊಂದು ಆಲ್ಬಂ ಸಾಂಗ್

Date:

ಕನ್ನಡ ಸಂಗೀತ ಲೋಕದಲ್ಲಿ ಹೊಸ ಹೊಸ ಆಲ್ಬಂ ಸಾಂಗ್ ಗಳ ಜಮಾನ ಶುರುವಾಗಿದೆ. ಜೀವನಕ್ಕೆ ಪ್ರೇರಣೆ ನೀಡುವ ಕಾನ್ಸೆಪ್ಟ್ ಮೇಲೆ ಸ್ಪಿರಿಟ್ ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಕೇಳುಗರನ್ನು ಅಟ್ರ್ಯಾಕ್ಟ್ ಮಾಡುತ್ತಿದೆ.

 

ಸೋನಿ ಆಚಾರ್ಯ ಮಾತಾನಾಡಿ, ತುಂಬಾ ಟೈಮ್ ತಗೊಂಡು ಸಾಂಗ್ ರೆಡಿ ಮಾಡಿದ್ದೇನೆ. ಇದು ನನ್ನ ಮೂರನೇ ಸಾಂಗ್. ನನ್ನ ಇಡೀ ತಂಡದ ಸಹಕಾರದೊಂದಿಗೆ ಆಲ್ಬಂ ಸಾಂಗ್ ರೆಡಿಯಾಗಿದೆ. ಪ್ರತಿಯೊಬ್ಬರು ಆಶೀರ್ವಾದಿಸಿ
ಎಂದರು.

 

 

ರಥವರ, ಮಫ್ತಿ, ತಾರಕಾಸುರ, ದಿಲ್ ಮಾರ್ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಪಳಗಿರುವ, ಕಳೆದ ಎಳೆಂಟು ವರ್ಷಗಳಿಂದ ಸಿನಿಮಾ ಇಂಡಸ್ಟ್ರೀಯಲ್ಲಿ ಗುರುತಿಸಿಕೊಂಡಿರುವ, ಈ ಹಿಂದೆ ಮಾಜಿ ಡವ್, ರಾಣಿ ಜೇನು ಎಂಬ ಎರಡು ಆಲ್ಬಂ ಸಾಂಗ್ ಗಳ ಸೃಷ್ಟಿಕರ್ತ ಸೋನಿ ಆಚಾರ್ಯ ಸಾಹಿತ್ಯ, ಸಂಗೀತ, ಧ್ವನಿ‌ ನೀಡಿ ನಟಿರುವ ಸ್ಪಿರಿಟ್ ಆಲ್ಬಂ ಸಾಂಗ್ ನ ರಾಜೇಶ್ವರಿ ಕಂಬೈನ್ಸ್ ಆಫಿಷಿಯಲ್ ಯೂಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ.

 

 

ಸೋನಿ ಆಚಾರ್ಯಗೆ ಜೋಡಿಯಾಗಿ ಜಾನಕಿ ನಾರಾಯಣ್ ನಟಿಸಿದ್ದು, ರಾಜ್ ಕಿಶೋರ್ ಕೊರಿಯೋಗ್ರಾಫು, ತನ್ವಿಕ್ ಜಿ ಕ್ಯಾಮೆರಾ ವರ್ಕ್, ಮಧು ತುಂಬಕೆರೆ ಸಂಕಲನ ಸ್ಪಿರಿಟ್ ಆಲ್ಬಂ ಸಾಂಗ್ ಗಿದೆ. ಪ್ರಣವ್ ಮ್ಯೂಸಿಕ್ ಪೋಸ್ಟ್ ಪ್ರೊಡಕ್ಷನ್ ಜವಾಬ್ದಾರಿ ಹೊತ್ತುಕೊಂಡಿದ್ದು, ಗಗನ್, ಸಂತು ಆಚಾರ್ಯ, ಪವನ್ ಬೊಮ್ಮನಕಟ್ಟೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...