ಇಂದು ತಪ್ತಮುದ್ರಾಧಾರಣೆ, ಅಗಲಿದ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನೆನಪಲ್ಲಿ ಭಕ್ತರಿದ್ದಾರೆ.
ಶ್ರೀಗಳು ದೈಹಿಕವಾಗಿ ದೂರವಾಗಿದ್ದಾರೆ. ಅವರು ನಿಗೂಢ ಸಾವನ್ನಪ್ಪಿ 5 ದಿನ ಕಳೆದಿದೆ. ಆದರೆ, ಭಕ್ತರ ಮನದಂಗಳದಲ್ಲಿ ಚಿರಾಯು ಆಗಿ ಉಳಿದಿದ್ದಾರೆ.
ತಪ್ತಮುದ್ರಾಧಾರಣೆ ಯ ಈ ದಿವಸವಂತೂ ಭಕ್ತರಿಗೆ ಶ್ರೀಗಳ ನೆನಪು ತುಂಬಾನೇ ಕಾಡುತ್ತದೆ.
ಮುದ್ರಾಧಾರಣೆ ಅಂದೊಡನೆ ಉಡುಪಿಯಲ್ಲಿ ಮೊದಲು ನೆನಪಾಗುವುದೇ ಶೀರೂರು ಶ್ರೀಗಳು. ಎಲ್ಲಾ ಮಠಗಳಿಗಿಂತ ಮೊದಲು ಶೀರೂರು ಮಠದಲ್ಲಿ ಮುದ್ರಾಧಾರಣೆ ಶುರುವಾಗ್ತಿತ್ತು.
ಶಾಲಾ-ಕಾಲೇಜು ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ತೊಂದ್ರೆ ಆಗ್ಬಾರ್ದು ಅಂತ ಶೀರೂರು ಶ್ರೀ ಬೇರೆ ಮಠಗಳಿಗಿಂತ ಮೊದಲೇ ಮುದ್ರಾಧಾರಣೆ ನಡೆಸುತ್ತಿದ್ದರು.
ಈ ಬಾರಿ ಶ್ರೀ ಮಠದಲ್ಲಿ ನೀರವ ಮೌನ. ಮಠ ತಣ್ಣಗಾಗಿದೆ. ಮಠವನ್ನು ಪೊಲೀಸರು ಸುಪರ್ಧಿಗೆ ತಗೊಂಡು ತನಿಖೆ ನಡೆಸ್ತಿದ್ದಾರೆ.