ಶಂಕಿತ ಉಗ್ರನ ಜಾಡುಹಿಡಿದು ಬಂದ ಮಂಗಳೂರು ಪೋಲಿಸರು

Date:

ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಸ್ಪೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ,‌ ಮಂಗಳೂರು ಪೊಲೀಸರ ತಂಡ ಶಂಕಿತ ಉಗ್ರನ ಹೆಜ್ಜೆ ಜಾಡು ಹಿಡಿದ ಮೈಸೂರಿಗೆ ಆಗಮಿಸಿದ್ದಾರೆ .

ಇನ್ನೂ ಶಂಕಿತ ಉಗ್ರ ಮೈಸೂರಿನ ಲೋಕನಾಯಕ ನಗರದಲ್ಲಿ ಬಾಡಿಗೆಗೆ ಇದ್ದ . ಶಂಕಿತ ಉಗ್ರನ ಸ್ನೇಹಿತನನ್ನ ಮೇಟಗಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ .

ಶಂಕಿತ ಉಗ್ರನಿಗೆ ಮೊಬೈಲ್ ನೀಡಿದ್ದವನನ್ನ ಖಾಕಿ ಪಡೆ ವಶಕ್ಕೆ ಪಡೆದುಕೊಂಡಿದೆ . ಇನ್ನೂ ಈತ ಶಂಕಿತ ಉಗ್ರನಿಗೆ 10ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಕೊಟ್ಟಿದ್ದಾನೆ . ಮಂಗಳೂರು-ಮೈಸೂರು ಪೊಲೀಸರು ಈಗ ಶಂಕಿತ ಉಗ್ರನ ಸ್ನೇಹಿತನನ್ನ ವಿಚಾರಣೆ ಮಾಡುತ್ತಿದ್ದಾರೆ .

ಸ್ಪೋಟ ಪ್ರಕರಣದ ಶಂಕಿತ ಉಗ್ರ ಶಿವಮೊಗ್ಗ ಮೂಲದ ಇರ್ಫಾನ್ ಎಂದು ಗುರುತಿಸಲಾಗಿದೆ . ಇನ್ನೂ ಈ ಶಂಕಿತ ಉಗ್ರ ಭಯೋತ್ಪಾದಕತೆ ಪ್ರಚೋದಿಸುವ ಬರಹ ಬರೆದಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ .ಸೂರತ್ಕಲ್‌ನಲ್ಲಿ ಗೋಡೆ ಮೇಲೆ ಭಯೋತ್ಪಾದಕತೆ ಪ್ರಚೋದಿಸುವ ಬರಹ ಬರೆದಿದ್ದ . ಹಾಗೂ ಬಾಂಬ್ ಸ್ಪೋಟದಲ್ಲಿ ಶೇ.60ರಷ್ಟು ಗಾಯಗೊಂಡಿದ್ದಾನೆ .

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...