ನೀರುಪಾಲಾದ ಬಾಲಕಿ ಶವ ಪತ್ತೆ

admin
0 Min Read

ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ನೀರುಪಾಲಾದ ಬಾಲಕಿ ಮೃತದೇಹ ಇಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.
ನಿಧಿ ಆಚಾರ್ಯ (9) ಮೃತ ದುರ್ದೈವಿ. ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದ ನಿಧಿ ಆಚಾರ್ಯ ನಿನ್ನೆ ನೀರುಪಾಲಾಗಿದ್ದಳು. ಅಗ್ನಿಶಾಮಕ ದಳದವರು , ಪೊಲೀಸರು ನಿನ್ನೆ ರಾತ್ರಿ ಕಾರ್ಯಾಚರಣೆ ಮಾಡಿದ್ದರೂ ಬಾಲಕಿ ಶವ ಪತ್ತೆಯಾಗಿರಲಿಲ್ಲ. ಇಂದು ಘಟನಾ ಸ್ಥಳದಿಂದ 100ಮೀ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.


ಎನ್ ಡಿ ಆರ್ ಎಫ್ ಅವರ ಜೊತೆ ಶೋಧ ಕಾರ್ಯದಲ್ಲಿ ಸ್ಥಳೀಯ ಮನೋಹರ್ ಎಂಬುವವರು ಬೋಟ್ ನಲ್ಲಿ ತೆರಳಿದ್ದರು.

Share This Article
Leave a Comment