No menu items!
12.4 C
Munich
Wednesday, April 29, 2026

ಅಂದು ನಾಲ್ವರಿಗೆ, ಈಗ 10 ಜನರಿಗೆ ಪುನೀತ್ ಕಣ್ಣುಗಳಿಂದ ದೃಷ್ಟಿ

Must read

ಪುನೀತ್‌ ರಾಜ್‌ಕುಮಾರ್‌ ಅವರನ್ನು ನಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿದ್ದಾರೆ. ಆದರೆ ಅವರ ಸಿನಿಮಾಗಳು ಅವರ ಆದರ್ಶಗಳು ಅವರ ಕೆಲಸಗಳು ನಮ್ಮ ಮುಂದೆ ಸದಾಕಾಲ ಇದ್ದೇ ಇರುತ್ತದೆ. ಈ ನಡುವೆ ಪುನೀತ್‌ ಅವರು ನೇತ್ರದಾನ ಮಾಡಿದ್ದು, ಅವರ ಪುಣ್ಯದ ಕೆಲಸದಿಂದ ಈಗಾಗಲೇ ನಾಲ್ವರು ಈ ಜಗತ್ತನ್ನು ನೋಡುತ್ತಿದಿದ್ದಾರೆ.

ಈ ನಡುವೆ ಪುನೀತ್‌ ಅವರ ನೇತ್ರದಿಂದ ತೆಗೆದುಕೊಂಡಿದ್ದ ಇತರೆ ಅಗಾಂಶಗಳಿಂದ ಇನ್ನೂ 10 ಮಂದಿಗೆ ಸಹಾಯವಾಗಲಿದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ವೈದ್ಯರು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.
ಹೌದು, ಪುನೀತ್‌ ಅವರ ಕಣ್ಣಿನಿಂದ ಸ್ಟೆಮ್ ಸೆಲ್ (ಕಣ್ಣಿನ ರಿಮ್ ಭಾಗದಿಂದ ) ಗಳನ್ನು ಪ್ರಯೋಗಲಾಯದಲ್ಲಿ, ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದ್ದು, ಈ ಪ್ರಯೋಗ ಮಲ್ಟಿಪಲ್ ಆಗಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ಹೀಗಾಗಿ ಕನ್ನಡಿಗರ ಮುದ್ದಿನ ಅಪ್ಪು, ಕನ್ನಡ ನಾಡನ್ನು ಮತ್ತೊಬ್ಬರ ಕಣ್ಣಿನಲ್ಲಿ ನೋಡಲಿದ್ದು, ಮತ್ತೆ ಕನ್ನಡ ನಾಡಿನಲ್ಲಿ ಅಭಿಮಾನಿ ದೇವರುಗಳ ಕಣ್ಣಿನಲ್ಲಿ ನಾಡನ್ನು ನೋಡಲಿದ್ದಾರೆ.

. ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಸೆಲ್ ಚಿಕಿತ್ಸೆಯು ಉತ್ತಮವಾಗಿದೆ. ಉದಾಹರಣೆಗೆ ರೆಟಿನಲ್ ಪಿಗ್ಮೆಂಟ್ ಎಪಿಥೇಲಿಯಲ್ (RPE) ಕೋಶಗಳು. ಕಣ್ಣಿನ ಕಾಯಿಲೆಯಿಂದಾಗಿ ಹಾನಿಗೊಳಗಾದ ಅಥವಾ ಕಳೆದುಹೋದ ಜೀವಕೋಶಗಳನ್ನು ಬದಲಿಸಲು ಹೊಸ RPE ಕೋಶಗಳನ್ನು ಮತ್ತೆ ಕಣ್ಣಿನೊಳಗೆ ಚುಚ್ಚಲಾಗುತ್ತದೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article