‘ಆಹಾರದ ಕಳಪೆ ಗುಣಮಟ್ಟ’ದ ಬಗ್ಗೆ ವಿಡಿಯೋ ಮಾಡಿದ್ದ ಯೋಧನ ಮಗ ಅನುಮಾನಸ್ಪದ ಸಾವು..!! ನಡೆದಿದ್ದೇನು..??

Date:

‘ಆಹಾರದ ಕಳಪೆ ಗುಣಮಟ್ಟ’ದ ಬಗ್ಗೆ ವಿಡಿಯೋ ಮಾಡಿದ್ದ ಯೋಧನ ಮಗ ಅನುಮಾನಸ್ಪದ ಸಾವು..!! ನಡೆದಿದ್ದೇನು..??

ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆಂದು ಆರೋಪಿಸಿದ್ದ ತೇಜ್ ಬಹದ್ದೂರ್ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು.. ಈ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಬಹದ್ದೂರ್ ಆರೋಪ ಸುಳ್ಳು ಎಂದು ಹೇಳಿದ್ರು.. ಆನಂತರ ಕೆಲಸದಿಂದ ವಜಾ ಕೂಡ ಮಾಡಲಾಗಿತ್ತು.. 

ಸದ್ಯ ಈ ವಿಚಾರದ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಈ ಯೋಧನ ಮನೆಯಲ್ಲಿ ಅನುಮಾನಸ್ಪದ ಸಾವು ಸಂಭವಿಸಿದೆ.. ಈತನ ಮಗ ರೋಹಿತ್ ಮನೆಯ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.. ರೋಹಿತ್ ಕೋಣೆ ಬಾಗಿಲು ಹಾಕಿರುವುದನ್ನ ಕಂಡು ಮನೆಯವರು ನಂತರ ಬಾಗಿಲು ತೆಗೆಯುವಂತೆ ಹೇಳಿದ್ದಾರೆ.. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದೆ ಇದಿದ್ರಿಂದ ಬಾಗಿಲನ್ನ ಮುರಿದು ಒಳಗೆ ಪ್ರವೇಶ ಮಾಡಲಾಗಿದೆ..

ಈ ಸಂದರ್ಭದಲ್ಲಿ ಮಗ ರೋಹಿತ್ ಮೃತಪಟ್ಟಿರುವುದು ಕಂಡು ಬಂದಿದೆ.. ಜೊತೆಗೆ ಆತನ ಕೈಯಲ್ಲಿ ಬಂದೂಕು ಸಹ ಇತ್ತು ಎಂಬುದನ್ನ ಪೊಲೀಸರು ತಿಳಿಸಿದ್ದಾರೆ.. ಸದ್ಯ ತೇಜ್ ಬಹದ್ದೂರ್ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದ ಕರ್ತವ್ಯದಲ್ಲಿದ್ದು, ಅವರಿಗೆ ಈ ಕುರಿತು ಮಾಹಿತಿಯನ್ನ ತಿಳಿಸಲಾಗಿದ್ಯಂತೆ.. ಆದರೆ ಮಗನ ಸಾವಿಗೆ ಸೂಕ್ತ ಕಾರಣ ಇನ್ನು ತಿಳಿದು ಬಂದಿಲ್ಲ.. ಸದ್ಯ ಪೊಲೀಸರು ತನಿಖೆ ಕೈಗೆತ್ತುಕೊಂಡಿದ್ದಾರೆ..

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...