ಆ್ಯಂಕರ್ ರಮಾಕಾಂತ್ ಈಗ ಆ್ಯಕ್ಟರ್.!

Date:

ಪತ್ರಿಕೋದ್ಯಮಕ್ಕೂ ಸಿನಿಮಾ ಕ್ಷೇತ್ರಕ್ಕೂ ಎಲ್ಲಿಲ್ಲದ ನಂಟು. ಪತ್ರಿಕೋದ್ಯಮದಲ್ಲಿ ಬದುಕು ಕಟ್ಟಿಕೊಳ್ಳುತ್ತಾ ಸಿನಿಯಾನ ಆರಂಭಿಸಿದ ಅನೇಕರು‌ ನಮ್ಮ ನಡುವೆ ಇದ್ದಾರೆ.
ಇದೀಗ ಜನಪ್ರಿಯ ಸುದ್ದಿವಾಹಿನಿ ಸುವರ್ಣ ನ್ಯೂಸ್ ನ ರಮಾಕಾಂತ್ ಅವರ ಸರದಿ.
ರಮಾಕಾಂತ್… ಬಹುಶಃ ಇವರ ಹೆಸರು ಕೇಳದೇ ಇರುವವರೇ ಇಲ್ಲ. ಕರ್ನಾಟಕದ ಮನೆಮನೆಗೂ ಗೊತ್ತಿರುವ ನಿರೂಪಕರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಒಬ್ಬರು ಆ್ಯಂಕರ್ ರಮಾಕಾಂತ್.
ಪತ್ರಿಕೋದ್ಯಮದಲ್ಲಿ ತನ್ನದೇಯಾದ ಗುರುತು ಮೂಡಿಸಿರುವ ರಮಾಕಾಂತ್ ಸಿನಿಮಾ ಮಾಡಿದ್ದಾರೆ..!
ಗಿರೀಶ್ ಎಂಬ ಹೊಸ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಒಂದ್ ಕಥೆ ಹೇಳ್ಲಾ’ ಸಿನಿಮಾದಲ್ಲಿ ರಮಾಕಾಂತ್ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಣದ ಜವಬ್ದಾರಿಗೂ ಕೈ ಜೋಡಿಸಿದ್ದಾರೆ.
ಸಿನಿಮಾದಲ್ಲಿ ಉಪಕತೆಯೊಂದರಲ್ಲಿ ರಮಾಕಾಂತ್ ಮತ್ತು ಅವರ ಪತ್ನಿ ಸೌಮ್ಯ ರಮಾಕಾಂತ್ ಅಭಿನಯಿಸಿದ್ದಾರೆ. ಕಾಕತಾಳಿಯವೆಂದರೆ ಸಿನಿಮಾದಲ್ಲೂ ರಮಾಕಾಂತ್ ಮತ್ತು ಸೌಮ್ಯ ದಂಪತಿ.
ಪ್ರಮುಖ ಪಾತ್ರದಲ್ಲಿ ತಾಂಡವ್ ರಾವ್, ಶಕ್ತಿ ಸೋಮಣ್ಣ ಕಾಣಿಸಿಕೊಂಡಿದ್ದಾರೆ.
ಕೀರ್ತನ್ ಪೂಜಾರಿ ಛಾಯಾಗ್ರಹಣದ ಹೊಣೆ ನಿಭಾಯಿಸಿದ್ದು. ರೋಣದ ಬಕ್ಕೇಶ್ , ಕಾರ್ತಿಕ್ ಸಿ ರಾವ್ ಸಂಗೀತದ ಬಲ ತುಂಬಿದ್ದಾರೆ. ರಮಾಕಾಂತ್ ಅವರಲ್ಲದೆ ನಿರ್ದೇಶಕ ಗಿರೀಶ್ ಸೇರಿ 23 ಮಂದಿ ಬಂಡವಾಳ ಹಾಕಿದ್ದಾರೆ.

Share post:

Subscribe

spot_imgspot_img

Popular

More like this
Related

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು:...