ಈ 4 ರಾಶಿಯವರು ಚಿಕ್ಕ ವಯಸ್ಸಲ್ಲೇ ಶ್ರೀಮಂತರಾಗ್ತಾರೆ ಎನ್ನುತ್ತೆ ಜ್ಯೋತಿಷ್ಯ

Date:

ಶ್ರೀಮಂತಿಕೆ ಅನ್ನೋದು ಯಾರು ಬೇಡ ಅಂತಾರೆ? ಅದರಲ್ಲೂ ಬಹಳ ಸಣ್ಣ ವಯಸ್ಸಿನಲ್ಲೇ ಶ್ರೀಮಂತ ಅನ್ನಿಸಿಕೊಳ್ಳುವುದು ಹೆಚ್ಚಿನ ಜನರ ಆದ್ಯತೆ ಆಗಿರುತ್ತದೆ. ಹಲವರು ಈ ಗುರಿಯ ಕಡೆಗೆ ಪ್ರಯತ್ನವನ್ನು ಮಾಡುತ್ತಾರೆ ಮತ್ತು ಅದರಲ್ಲಿ ಯಶಸ್ಸು ಸಹ ಪಡೆಯುತ್ತಾರೆ. ಕೆಲವರು ಬಹಳ ಕಾಲ ಅದಕ್ಕಾಗಿ ಕಾಯಬೇಕಾಗುತ್ತದೆ.

 

ಆದರೆ, ಜ್ಯೋತಿಷ್ಯ ನಂಬುವವರಿಗಾಗಿ ಇಲ್ಲಿ ಒಂದು ಮಾಹಿತಿ ಇದೆ. ಈ ನಾಲ್ಕು ರಾಶಿಯವರು ಸಣ್ಣ ವಯಸ್ಸಿನಲ್ಲೇ ಆರ್ಥಿಕ ಯಶಸ್ಸು ಪಡೆಯುತ್ತಾರೆ ಎಂಬುದು ಜ್ಯೋತಿಷದಲ್ಲಿನ ವಿಚಾರ. ಈ ನಾಲ್ಕು ರಾಶಿಯವರು ಕಠಿಣ ಪರಿಶ್ರಮಿಗಳಂತೆ. ಈ ಶ್ರಮದ ಜತೆಗೆ ಅದೃಷ್ಟ ಕೈ ಹಿಡಿಯುತ್ತದೆ ಎಂಬುದು ಸಂಗತಿ. ಯಾವುವು ಆ ನಾಲ್ಕು ರಾಶಿಗಳು? ತಿಳಿಯುವುದಕ್ಕೆ ಮುಂದೆ ಓದಿ.

1. ವೃಷಭ

ಈ ರಾಶಿಯವರಿಗೆ ಅತ್ಯಂತ ವಿಲಾಸಿ ಬದುಕನ್ನು ಅನುಭವಿಸುವುದಕ್ಕೆ ಅವಕಾಶ ಸಿಗುತ್ತದೆ. ಅಂದ ಹಾಗೆ ಇವರಿಗೂ ಜಗತ್ತಿನ ಸುಖಗಳನ್ನು ಅನುಭವಿಸುವ ಬಗ್ಗೆ ಕುತೂಹಲ, ಆಸೆ ಎಲ್ಲವೂ ಇರುತ್ತದೆ. ಏಕೆಂದರೆ ಈ ರಾಶಿಯ ಅಧಿಪತಿ ಶುಕ್ರ. ಎಲ್ಲ ರೀತಿಯ ಭೋಗಗಳನ್ನು ಅನುಭವಿಸುವುದಕ್ಕೆ ಕಾರಕನೇ ಈ ಶುಕ್ರ. ಈ ವ್ಯಕ್ತಿಗಳು ಕೆಲವು ಕಲೆಗಳನ್ನು ಸಿದ್ಧಿಸಿಕೊಂಡಿರುತ್ತಾರೆ. ಆ ನಂತರ ತಮ್ಮ ಪರಿಶ್ರಮದ ಮೂಲಕ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾರೆ.

 

2. ಕರ್ಕಾಟಕ

ಈ ರಾಶಿಯ ಜನರು ಯಶಸ್ಸು ಪಡೆಯುವುದಕ್ಕಾಗಿ ಬಹಳ ಶ್ರಮ ಪಡುತ್ತಾರೆ. ಇದು ಇವರ ಬಲವೂ ಹೌದು. ತಮ್ಮ ಕುಟುಂಬವನ್ನು ತುಂಬ ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಇವರ ಆದ್ಯತೆ ಆಗಿರುತ್ತದೆ. ಜೀವನದಲ್ಲಿ ತುಂಬ ಎತ್ತರವನ್ನು ತಲುಪುತ್ತಾರೆ. ತಮ್ಮ ಕಠಿಣ ಪರಿಶ್ರಮದ ಮೂಲಕವೇ ಬಹಳ ಸಣ್ಣ ವಯಸ್ಸಿನಲ್ಲಿ ಯಶಸ್ಸು ಪಡೆಯುತ್ತಾರೆ. ಪ್ರೀತಿಪಾತ್ರರು ಮತ್ತು ಅವರ ಸಂತೋಷಕ್ಕಾಗಿ ಏನು ಮಾಡುವುದಕ್ಕೂ ಇವರು ಸೈ. ಕರ್ಕಾಟಕ ರಾಶಿಯವರು ಭಾವನಾಜೀವಿಗಳು.

3. ಸಿಂಹ

ಈ ರಾಶಿಯ ಅಧಿಪತಿ ರವಿ. ನಾಯಕ, ಉನ್ನತಾಧಿಕಾರವನ್ನು ಸೂಚಿಸುವ ಗ್ರಹ ಇದು. ಈ ರಾಶಿಯವರಲ್ಲಿ ಅದ್ಭುತವಾದ ನಾಯಕತ್ವ ಗುಣ ಇರುತ್ತದೆ. ಅದೇ ನಾಯಕತ್ವ ಗುಣದ ಬಲದಿಂದ ಬಹಳ ಶೀಘ್ರವಾಗಿ ಯಶಸ್ಸಿನ ಶಿಖರದ ತುದಿಯನ್ನು ತಲುಪಿಕೊಳ್ಳುತ್ತಾರೆ. ಎಂಥ ದೊಡ್ಡ ಗುಂಪಿನ ಮಧ್ಯೆ ಇದ್ದರೂ ತಮ್ಮದೇ ಛಾಪನ್ನು ಮೂಡಿಸುತ್ತಾರೆ. ಜನರು ತಮ್ಮನ್ನು ಗುರುತಿಸಲಿ, ಹೊಗಳಲಿ ಹಾಗೂ ಮಾದರಿ ಎಂಬಂತೆ ನೋಡಲಿ ಎಂದು ಬಯಸುತ್ತಾರೆ. ಆ ಕಾರಣಕ್ಕೆ ಹೆಚ್ಚು ಶ್ರಮ ಹಾಕಿ ಕೆಲಸ ಮಾಡುತ್ತಾರೆ. ಎತ್ತರಕ್ಕೆ ಏರಲು ಹಂಬಲಿಸುತ್ತಾರೆ.

4. ವೃಶ್ಚಿಕ

ಈ ರಾಶಿಯ ಜನರು ಏಣಿಗೂ ಕಾಯದೇ ಎತ್ತರಕ್ಕೆ ಏರಲು ಬಯಸುವ ಮಹತ್ವಾಕಾಂಕ್ಷಿಗಳು. ವೈಭೋಗಗಳ ಬಗ್ಗೆ ಇವರಿಗೆ ಬಹಳ ಆಸೆ ಇರುತ್ತದೆ. ಅವುಗಳನ್ನು ದಕ್ಕಿಸಿಕೊಳ್ಳುವುದಕ್ಕಾಗಿ ಹೆಚ್ಚು ಹೆಚ್ಚು ದುಡಿಯುತ್ತಾರೆ. ಕಾರು- ಬಂಗಲೆ ಮತ್ತಿತರ ಸವಲತ್ತುಗಳು ಇವರನ್ನು ವಿಪರೀತ ಸೆಳೆಯುತ್ತವೆ. ಇವೆಲ್ಲವನ್ನೂ ಪಡೆಯಬೇಕು ಎಂಬ ಹಪಹಪಿ ಇವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...