ಒಂದು ದಿನ, ಒಬ್ಬ ಡೈರೆಕ್ಟರ್, 2 ಸಿನಿಮಾ..! ದರ್ಶನ್ ಜೊತೆ ಗಣೇಶ್ ಅಖಾಡಕ್ಕೆ?

Date:

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ನಟರ ಸಿನಿಮಾಗಳ ಹಬ್ಬ ಶುರುವಾಗಿದೆ. ಒಂದಾದ ಮೇಲೊಂದರಂತೆ ಸ್ಟಾರ್ ನಟರ ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತಿವೆ.
ಪ್ರಮುಖವಾಗಿ ಕುರುಕ್ಷೇತ್ರ ಸಿನಿಮಾ ರಿಲೀಸ್​ಗೆ ದಿನಗಣನೆ ಆರಂಭವಾಗಿದೆ. ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶನದ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ 50ನೇ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ರವಿಶಂಕರ್. ನಿಖಿಲ್​ ಕುಮಾರಸ್ವಾಮಿ ಮೊದಲಾದವರನ್ನು ಒಳಗೊಂಡ ದೊಡ್ಡ ತಾರಾಗಣವಿದೆ.
ಸೆಟ್ಟೇರಿದ್ದಲ್ಲಿಂದಲೂ ಸದ್ದು ಮಾಡುತ್ತಿರುವ ಕುರುಕ್ಷೇತ್ರದ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 9ಕ್ಕೆ ಎಂದು ಮೊದಲು ಹೇಳಲಾಗಿತ್ತು. ನಂತರ ಆಗಸ್ಟ್ 2ಕ್ಕೆ ಅಂತ ಅನೌನ್ಸ್ ಮಾಡಲಾಗಿತ್ತು. ಬಳಿಕ ಆಗಸ್ಟ್ 9ಕ್ಕೇ ಎಂದು ನಿಗಧಿಪಡಿಸಲಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆಗಸ್ಟ್ 9ಕ್ಕೆ ಕುರುಕ್ಷೇತ್ರ ಮತ್ತು ಸುದೀಪ್ ಅಭಿನಯದ ಪೈಲ್ವಾನ್ ಕೂಡ ರಿಲೀಸ್ ಆಗುತ್ತದೆ ಎಂಬ ಮಾತಿತ್ತು. ಆದರೆ, ಕುರುಕ್ಷೇತ್ರ ಪ್ರೀಪೋನ್ ಮಾಡಲಾಗಿತ್ತು. ಪೈಲ್ವಾನ್ ಪೋಸ್ಟ್​ಪೋನ್ ಆಗಿದ್ದು,. ಈಗ ಕುರುಕ್ಷೇತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ, ಆಗಸ್ಟ್ 9ರಂದು ತೆರೆಗೆ ಬರ್ತಿದೆ.

ಆಗಸ್ಟ್ 2ಕ್ಕೆ ಕುರುಕ್ಷೇತ್ರ ಎಂದಾದಾಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್​ ಅನ್ನು ಆಗಸ್ಟ್ 9ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಗಿಮಕ್ ಕೂಡ ಕುರುಕ್ಷೇತ್ರ ಡೈರೆಕ್ಟರ್ ನಾಗಣ್ಣ ಸಿನಿಮಾ..! ಆಗಸ್ಟ್ 9ಕ್ಕೇ ಗಿಮಿಕ್ ರಿಲೀಸ್ ಆದರೆ ಒಂದೇ ದಿನ ಒಬ್ಬ ಡೈರೆಕ್ಟರ್​​ರ ಎರಡು ಮೂವಿಗಳು ರಿಲೀಸ್ ಆಗುತ್ತದೆ.

ದರ್ಶನ್ ಮತ್ತು ಗಣೇಶ್ ಆತ್ಮೀಯ ಸ್ನೇಹಿತರಾಗಿದ್ದು, ಒಂದೇ ದಿನ ಥಿಯೇಟರ್​​ ನಲ್ಲಿ ಮುಖಾಮುಖಿ ಆಗಲ್ಲ ಅನ್ಸುತ್ತೆ. ಥಿಯೇಟರ್ ಸಮಸ್ಯೆ ಕೂಡ ಕಾಡಬಾರದು. ಆದ್ದರಿಂದ ಗಿಮಿಕ್ ಮುಂದೂಡುವ ಸಾಧ್ಯತೆ ಇದೆ..ಕಾದು ನೋಡಬೇಕು.. ಏನ್ ಏನಾಗುತ್ತದೆ ಎಂದು..!

Share post:

Subscribe

spot_imgspot_img

Popular

More like this
Related

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...