ಕೆಲವ್ರಿಗೆ ಮಾತ್ರ ಮಾತನಾಡೋ ಸ್ವಾತಂತ್ರ್ಯ ಇರೋದಾ : ರಾಕ್ ಲೈನ್

Date:

ಬೆಂಗಳೂರು: ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ? ನಾನು ಯಾರ ಮನಸ್ಸಿಗೂ ನೋವು ಮಾಡಿಲ್ಲ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ.

ಇಂದು ಬೆಳಗ್ಗೆ ಜೆಡಿಎಸ್ ಕಾರ್ಯಕರ್ತರು ತಮ್ಮ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರ ಕುರಿತು ರಾಕ್‍ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದರು. ಕೆಲವರು ತಮಗೆ ಮಾತ್ರ ವಾಕ್ ಸ್ವಾತಂತ್ರ್ಯ ಇದೆ ಅಂತ ತಿಳಿದುಕೊಂಡಿದ್ದಾರೆ. ನಾನು ಯರ ಮನಸ್ಸಿಗೂ ನೀವು ಮಾಡುವ ಹೇಳಿಕೆ ನೀಡಿಲ್ಲ. ಇಂದು ಅವರ ಬೆಂಬಲಿಗರು ಯಾಕೆ ಪ್ರತಿಭಟನೆ ಮಾಡಿದ್ರು ಅನ್ನೋದು ನನಗೆ ಗೊತ್ತಿಲ್ಲ.

ಎಲ್ಲ ಪಕ್ಷದವರೂ ನನ್ನನ್ನು ರಾಜಕಾರಣಕ್ಕೆ ಕರೆದಿದ್ರೂ ಹೋಗಿಲ್ಲ. ನಾನು ಮಂಡ್ಯ ಮತ್ತು ರಾಜ್ಯ ರಾಜಕಾರಣಕ್ಕೂ ನಾನು ಬರಲ್ಲ. ಈ ಹಿಂದೆಯೇ ರಾಜಕಾರಣಕ್ಕೆ ನಾನು ಬರಲ್ಲ ಅಂತ ಹೇಳಿದ್ದು, ಈಗ್ಯಾಕೆ ಬರಲಿ. ನಾನು ಮೊದಲಿನಿಂದಲೂ ಅಂಬರೀಶ್ ಅವರ ಜೊತೆ ಚುನಾವಣೆಗೆ ಹೋಗಿದ್ದೇನೆ. ನಮ್ಮಿಬ್ಬರದ್ದು ಸುಮಾರು 20 ವರ್ಷಗಳ ಬಾಂಧವ್ಯ. ಕಾರಣಾಂತರಗಳಿಂದ ಸುಮಲತಾ ಅವರು ರಾಜಕಾರಣಕ್ಕೆ ಪ್ರವೇಶ ಮಾಡುವಂತಾಯ್ತು.

ಎಲ್ಲ ಪಕ್ಷದವರೂ ನನ್ನನ್ನು ರಾಜಕಾರಣಕ್ಕೆ ಕರೆದಿದ್ರೂ ಹೋಗಿಲ್ಲ. ನಾನು ಮಂಡ್ಯ ಮತ್ತು ರಾಜ್ಯ ರಾಜಕಾರಣಕ್ಕೂ ನಾನು ಬರಲ್ಲ. ಈ ಹಿಂದೆಯೇ ರಾಜಕಾರಣಕ್ಕೆ ನಾನು ಬರಲ್ಲ ಅಂತ ಹೇಳಿದ್ದು, ಈಗ್ಯಾಕೆ ಬರಲಿ. ನಾನು ಮೊದಲಿನಿಂದಲೂ ಅಂಬರೀಶ್ ಅವರ ಜೊತೆ ಚುನಾವಣೆಗೆ ಹೋಗಿದ್ದೇನೆ. ನಮ್ಮಿಬ್ಬರದ್ದು ಸುಮಾರು 20 ವರ್ಷಗಳ ಬಾಂಧವ್ಯ. ಕಾರಣಾಂತರಗಳಿಂದ ಸುಮಲತಾ ಅವರು ರಾಜಕಾರಣಕ್ಕೆ ಪ್ರವೇಶ ಮಾಡುವಂತಾಯ್ತು.

ಅಂಬರೀಶ್ ತೋರಿಸುತ್ತಿದ್ದ ಪ್ರೀತಿ ಮತ್ತು ಬಾಂಧವ್ಯಕ್ಕಾಗಿ ಸುಮಲತಾ ಚುನಾವಣೆಗೆ ನಿಂತಾಗ ಅವರ ಬೆನ್ನುಲಾಬಿಗೆ ನಿಂತಿದ್ದೆ ಹೊರತು ಬೇರಾವ ಕಾರಣಕ್ಕೂ ಅಲ್ಲ. ನಾನು ಯಾವತ್ತೂ ಸಹ ಮಂಡ್ಯ ರಾಜಕಾರಣಕ್ಕೆ ಹೋಗಿಲ್ಲ. ಕಳೆದ ಎರಡು ವರ್ಷಗಳಿಂದ ಈ ರೀತಿಯ ಮಾತುಗಳ ಬಂದ್ರೂ ನಾನು ಎಲ್ಲಿಯೂ ರಾಜಕಾರಣಕ್ಕೆ ಸಂಬಂಧಿಸಿದ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಬರೋದು ಸಹಜ. ಆದ್ರೆ ಒಬ್ಬ ಮಹಿಳೆ ಬಗ್ಗೆ ಇಷ್ಟು ಕೆಳಮಟ್ಟದ ಹೇಳಿಕೆ ನೀಡುತ್ತಾರೆ. ಮಾಧ್ಯಮಗಳ ಮುಂದೆ ಉತ್ತರ ನೀಡುವ ಸುಮಲತಾ ಮನೆಯಲ್ಲಿ ಬಂದು ಕಣ್ಣೀರು ಹಾಕುತ್ತಾರೆ. ಹೇಗಾದ್ರೂ ಮಾಡಿ ಸುಮಲತಾ ಅವರನ್ನ ಮಂಡ್ಯದಿಂದ ಕಳುಹಿಸಬೇಕು ಎಂದು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಅಂಬರೀಶ್ ಅವರ ಸ್ಮಾರಕದ ವಿಚಾರ ಬಂದಾಗ ಮಧ್ಯೆ ಪ್ರವೇಶ ಮಾಡಿದ್ದೇನೆಯೇ ಹೊರತು ರಾಜಕಾರಣದಲ್ಲಿ ಅಲ್ಲ ಎಂದು ಹೇಳಿದರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...