ಚೀನಾದಿಂದ ಬಂದ ಕೊರೋನಾ ವೈರಸ್ ಇಂದು ಇಡೀ ವಿಶ್ವದಲ್ಲಿ ತನ್ನ ಕರಾಳ ಛಾಯೆ ಬೀರಿದೆ. ಭಾರತದಲ್ಲೂ ಕೊರೋನಾ ಶಾಕ್ ನೀಡಿದೆ. ಕರ್ನಾಟಕದಲ್ಲೂ ಡೆಡ್ಲಿ ವೈರಸ್ ಭೀತಿ ಹುಟ್ಟಿಸಿದೆ. ಈ ಭೀತಿ ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಪತ್ನಿ, ನಟಿ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರಿಗೂ ಕಾಡಿದೆ.
ಹೌದು ನಾಳೆ, ಅಂದ್ರೆ ಮಾರ್ಚ್ 7 ರಂದು ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ. ಅಭಿಮಾನಿಗಳು ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಆಚರಿಸಿಕೋ ತುದಿಗಾಲಲ್ಲಿದ್ದರು. ಯಶ್ ಅಭಿಮಾನಿಗಳೂ ಸಹ ರಾಧಿಕಾರಿಗೆ ಶುಭಹಾರೈಸಲು ಮನೆಗೆ ತೆರಳಲು ಪ್ಲ್ಯಾನ್ ಮಾಡಿದ್ದರು. ಯಶ್ – ರಾಧಿಕಾ ಅಭಿಮಾನಿಗಳ ಒಡಗೂಡಿ ರಾಧಿಕಾರ ಹುಟ್ಟುಹಬ್ಬ ಆಚರಿಸಲು ಯೋಚಿಸಿದ್ದರು. ಆದರೆ, ಕೊರೋನಾ ವೈರಸ್ ದೆಸೆಯಿಂದ ಆ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಕೊರೋನಾ ಭೀತಿಯಲ್ಲಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಲಾಗುತ್ತಿಲ್ಲ. ಹೆಚ್ಚಿನ ಜನ ಸೇರದಂತೆ ಮನವಿ ಮಾಡಲಾಗಿದೆ.
ಬೆಂಗಳೂರಲ್ಲಿ ಈ ಬಗ್ಗೆ ಮಾತನಾಡಿರುವ ರಾಕಿಂಗ್ ಸ್ಟಾರ್ ಯಶ್, ಕೊರೋನಾ ಭೀತಿಯಿಂದ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಮಕ್ಕಳು ಕೂಡ ಇದ್ದಾರೆ. ಕೊರೋನಾದಿಂದ ಹೆಚ್ಚಿನ ಜನ ಸೇರೋ ಹಾಗಿಲ್ಲ. ಹಾಗಾಗಿ ಯಾರೂ ಬೇಜಾರು ಮಾಡ್ಕೋಬೇಡಿ ಈ ಸಲ ದೊಡ್ಡ ರೀತಿಯಲ್ಲಿ ರಾಧಿಕಾ ಹುಟ್ಟುಹಬ್ಬ ಆಚರಣೆ ಬೇಡ ಅಂತ ಯಶ್ ಮನವಿ ಮಾಡಿದ್ದಾರೆ.
ಕೊರೋನಾ ಆತಂಕವಿದ್ದು ಗುಂಪು ಗುಂಪಾಗಿ ಸೇರಬೇಡಿ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾದರೂ ಚಿಕಿತ್ಸೆ ಪಡೆದುಕೊಳ್ಳಿ ಎಂದು ಯಶ್ ಕರೆಕೊಟ್ಟಿದ್ದಾರೆ.