ಗಾಳಿಪಟ -2 ನಿಂದ ಶರಣ್, ರಿಷಿ ಔಟ್​, ಗಣೇಶ್, ದಿಗಂತ್ ಇನ್..!

Date:

ಗೋಲ್ಡನ್ ಸ್ಟಾರ್ ಗಣೇಶ್, ದೂದ್​ಪೇಡ ದಿಗಂತ್, ಗಾಯಕ ರಾಜೇಶ್ ಕೃಷ್ಣನ್ ಅಭಿನಯದ ಗಾಳಿಪಟ ಸಿನಿಮಾವನ್ನು ನೀವೆಲ್ಲಾ ನೋಡಿದ್ದೀರಿ. 2008ರಲ್ಲಿ ಬಂದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಯೋಗರಾಜ್​ ಭಟ್ಟರು ನಿರ್ದೇಶನದ ಈ ಸಿನಿಮಾ ತೆರೆಕಂಡು ದಶಕ ಕಳೆದಿದೆ..! ಈಗ ಭಟ್ಟರು ಈ ಸಿನಿಮಾದ ಸಿಕ್ವೇಲ್ ನಿರ್ದೇಶಿಸಲು ಮುಂದಾಗಿದ್ದಾರೆ.
ಗಾಳಿಪಟ 2 ಸಿನಿಮಾ ಬರ್ತಿರೋ ವಿಷಯ ಗೊತ್ತೇ ಇದೆ. ಈ ಹಿಂದೆಯೇ ಇದು ಅನೌನ್ಸ್ ಆಗಿದೆ. ಗಣೇಶ್, ದಿಗಂತ್, ರಾಜೇಶ್​ಕೃಷ್ಣನ್ ಬದಲಿಗೆ ಶರಣ್, ರಿಷಿ, ಪವನ್​ಕುಮಾರ್ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಇನ್ನೇನು ಸಿನಿಮಾ ಶೂಟಿಂಗ್ ಶುರುವಾಗಬೇಕಿತ್ತು.. ಅಷ್ಟರಲ್ಲಿ.. ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಬಂದಿದೆ..! ಅದೇ ಶರಣ್, ರಿಷಿ ಔಟ್​ ಆಗಿದ್ದಾರೆ..! ಈ ಸ್ಥಾನಕ್ಕೆ ಗಾಳಿಪಟದ ಗಣಿ ಮತ್ತು ದಿಗ್ಗಿಯೇ ಬಂದಿದ್ದಾರೆ. ರಾಜೇಶ್ ಕೃಷ್ಣನ್​ ಜಾಗಕ್ಕೆ ಪವನ್​ ಕುಮಾರ್ ಉಳಿದುಕೊಂಡಿದ್ದಾರೆ.

ಕೆಲ ದಿನಗಳಿಂದ ನಟರ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದವು. ಈಗ ತಂಡದಲ್ಲಿ ಬದಲಾವಣೆ ಆಗಿದೆ. ನಿರ್ಮಾಪಕ ಮಹೇಶ್ ಈ ಬಗ್ಗೆ ತಿಳಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲೇ ಗಾಳಿಪಟ 2 ನಿರ್ಮಾಣ ಮಾಡುವುದಾಗಿ ಘೋಷಿಸಿದ್ದೇವು. ಇನ್ನು ಶರಣ್ ಮತ್ತು ರಿಷಿ ಆಯ್ಕೆ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಚಿತ್ರತಂಡ ಆಯ್ಕೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...