“ಗೋಲಿಬಾರ್ ಮಾಡುವುದಾದರೆ ಮಾಡಲಿ. ನಾವು ಎದೆಗುಂದುವುದಿಲ್ಲ. ದೇಶ ನಮ್ಮದು”

admin
0 Min Read

ಶಾಸಕ ಸೋಮಶೇಖರ್ ರೆಡ್ಡಿ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಶಾಸಕ ಜಮೀರ್ ಅಹ್ಮದ್ ಹಾಗೂ ಹಲವು ಬೆಂಬಲಿಗರನ್ನು ಕಂಟ್ರಿ ಕ್ಲಬ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಮೀರ್ ಆಗಮನದ ಹಿನ್ನೆಲೆ ಇಂದು ಸೋಮಶೇಖರ ರೆಡ್ಡಿ ಮನೆಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಶಾಸಕ ಜಮೀರ್ ಬೆಂಬಲಿಸಿ ಬೆಂಗಳೂರು, ಚನ್ನಪಟ್ಟಣ, ಗುಲಬರ್ಗಾ ಹಾಗೂ ರಾಜ್ಯದ ಹಲವೆಡೆಯಿಂದ ಅನೇಕ ಬೆಂಬಲಿಗರು ಆಗಮಿಸಿದ್ದರು ಬಿಜೆಪಿ ಸರ್ಕಾರದಲ್ಲಿ ಗೋಲಿಬಾರ್ ಸಾಮಾನ್ಯ. ಆದರೆ  ಗೋಲಿಬಾರ್ ಮಾಡುವುದಾದರೆ ಮಾಡಲಿ. ನಾವು ಎದೆಗುಂದುವುದಿಲ್ಲ. ದೇಶ ನಮ್ಮದು; ನಾವೂ ಈ ದೇಶದ ಪ್ರಜೆಗಳು ಎಂದು ಜಮೀರ್ ಅಹಮದ್ ಅವರು  ಆಕ್ರೋಶ ವೆಕ್ತಪಡಿಸಿದರು .

Share This Article
Leave a Comment