ಚಿಕ್ಕಲ್ಲೂರಿನ ಜಾತ್ರೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಲಕ್ಷಾಂತರ ಭಕ್ತಾದಿಗಳು ಬಂದು ಪಂಕ್ತಿ ಸೇವೆ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಕೆಲ ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಾಣಿಹಿಂಸೆ ಕಾರಣವನ್ನು ನೀಡಿ ಮರಿ ಮತ್ತು ಕೋಳಿ ಹೊಡೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಆದರೆ ಇದೀಗ ಈ ನಿರ್ಬಂಧವನ್ನು ಹೈ ಕೋರ್ಟ್ ತೆಗೆದು ಹಾಕಿದೆ. ಹೌದು ಚಿಕ್ಕಲ್ಲೂರಿನ ಪಂಕ್ತಿ ಸೇವೆಯನ್ನು ಭಕ್ತಾದಿಗಳು ಮುಂದುವರಿಸಬಹುದು, ಇದು ಹಿಂದಿನಿಂದಲೂ ನಡೆದು ಬಂದಿರೋ ಆಚರಣೆ, ಸಸ್ಯಾಹಾರ & ಮಾಂಸಾಹಾರ ಎರಡನ್ನೂ ಸಹ ಮಾಡಿ ಜನರು ಇಲ್ಲಿ ಏಕತೆಯನ್ನು ಮೆರೆಯುತ್ತಾರೆ, ಇದಕ್ಕೆ ಯಾವುದೇ ತಡೆ ಬೇಡ ಎಂದು ಆದೇಶವನ್ನು ನೀಡಿದೆ.
ಇನ್ನು ಈ ಸುದ್ದಿ ಚಿಕ್ಕಲ್ಲೂರು ಕ್ಷೇತ್ರದ ಭಕ್ತಾದಿಗಳಲ್ಲಿ ಮಂದಹಾಸ ಮೂಡಿಸಿದ್ದು, ಈ ವರ್ಷದ ಜಾತ್ರೆಯನ್ನು ಬಹಳ ಅದ್ದೂರಿಯಾಗಿ ಆಚರಿಸುವ ಯೋಜನೆಯಲ್ಲಿದ್ದಾರೆ.