ಜಂಬೂ ಸವಾರಿ ವೇಳೆ ಸಿಎಂ ಯಡಿಯೂರಪ್ಪ ನಡೆದುಕೊಂಡ ರೀತಿ ಇದೀಗ ವಿವಾದ ಸೃಷ್ಟಿಸಿದೆ..!

Date:

ನಿನ್ನೆ ಅಂದರೆ ಜಂಬೂ ಸವಾರಿ ನಡೆಯುತ್ತಿದ್ದ ವೇಳೆ ನಂದಿ ಧ್ವಜ ಪೂಜೆ ಮುಗಿದ ನಂತರ ಸಿಎಂ ಯಡಿಯೂರಪ್ಪನವರ ಕಾಲಿಗೆ ಬಿಜೆಪಿ ಮುಖಂಡ ಕಾ.ಪು ಸಿದ್ದಲಿಂಗಸ್ವಾಮಿ ಅವರು ತಮ್ಮ ಕೈಯಾರೆ ಚಪ್ಪಲಿಯನ್ನು ತಂದು ತೊಡಿಸಿದ್ದಾರೆ. ಹೌದು ನಂದಿಧ್ವಜ ಪೂಜೆ ಮುಗಿದ ನಂತರ ಯಡಿಯೂರಪ್ಪನವರು ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಕಾ.ಪು ಸಿದ್ದಲಿಂಗ ಸ್ವಾಮಿ ಅವರು ತಮ್ಮ ನಾಯಕನಿಗೆ ಚಪ್ಪಲಿಯನ್ನು ತಂದು ತೊಡಿಸಿದರು.

ಬಿಸಿಲಿನಲ್ಲಿ ನಡೆಯುತ್ತಿದ್ದ ತಮ್ಮ ನಾಯಕನ ಪರಿಸ್ಥಿತಿಯನ್ನು ಕಂಡು ಕಾ.ಪು ಸಿದ್ದಲಿಂಗ ಸ್ವಾಮಿ ಅವರು ಈ ಕೆಲಸವನ್ನೇನೋ ಮಾಡಿದರು ಆದರೆ ಇದೀಗ ಈ ಕಾರ್ಯವೇ ವಿವಾದವನ್ನು ಸೃಷ್ಟಿಸಿದ್ದು , ಮತ್ತೊಬ್ಬರ ಕೈಯಲ್ಲಿ ಚಪ್ಪಲಿ ತೊಡಿಸಿ ಕೊಳ್ಳುವಂತಹ ಬುದ್ಧಿ ಯಡಿಯೂರಪ್ಪನವರಿಗೆ ಯಾಕೆ ಬಂತು ಅವರೆ ಹಾಕಿ ಕೊಳ್ಳಬಹುದಿತ್ತು ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಅಷ್ಟು ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಈ ರೀತಿಯ ನಡೆಯನ್ನು ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಮಾಡಿದ್ದು ತಪ್ಪು ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ನಾಯಕರಾಗಿ ಇತರರ ಕೈಯಿಂದ ಚಪ್ಪಲಿ ಹಾಕಿಸಿಕೊಂಡಿದ್ದು ಈ ಹಿಂದೆ ಹಲವಾರು ಮಂದಿ ಮಾಡಿದ ಕೆಲಸವೇ….

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...