ಬಿಗ್ ಬಾಸ್ ಕನ್ನಡ ಕಿರುತೆರೆ ಪ್ರೇಕ್ಷಕರು ಮಾತ್ರವಲ್ಲದೆ ಇತರ ಜನರು ಸಹ ಕುತೂಹಲದಿಂದ ಮತ್ತು ಮನರಂಜನೆಯನ್ನು ಪಡೆದುಕೊಳ್ಳುವುದಕ್ಕೆ ನೋಡುವ ಕಾರ್ಯಕ್ರಮ ಬಿಗ್ ಬಾಸ್. ಅಷ್ಟರ ಮಟ್ಟಿಗೆ ಮನರಂಜನೆಯನ್ನು ಬಿಗ್ ಬಾಸ್ ಕಾರ್ಯಕ್ರಮ ನೀಡುವುದರಲ್ಲಿ ಇದುವರೆಗೂ ಸಹ ಯಾವುದೇ ಸೀಸನ್ನಲ್ಲಿಯೂ ಫೇಲ್ಯೂರ್ ಆಗಿಲ್ಲ.ಇನ್ನು ಈ ಬಾರಿಯೂ ಸಹ ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದ್ದು ಯಾವ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿವೆ.
ಇನ್ನು ಈ ಬಾರಿ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳ ಪೈಕಿ ರವಿ ಬೆಳಗೆರೆ ಅವರು ಸಹ ಒಬ್ಬರು ಎಂಬ ಮಾತಿದೆ. ಇನ್ನು ರವಿ ಬೆಳಗೆರೆ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿಯನ್ನು ಕೇಳಿದ್ದೇ ತಡ ಕೆಲ ರಾಜ್ ವಂಶದ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೌದು ಇದಕ್ಕೆ ಕಾರಣ ರವಿ ಬೆಳಗೆರೆ ಅವರು ಈ ಹಿಂದೆ ಬರೆದು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ ಒಂದು ಪುಸ್ತಕ. ಹೌದು ರಾಜ್ ಲೀಲಾ ಮತ್ತು ವಿನೋದ ಎಂಬ ಬುಕ್ ಬರೆಯುವುದರ ಮುಖಾಂತರ ರಾಜ್ ವಂಶದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರವಿ ಬೆಳಗೆರೆ ಅವರು ಇದೀಗ ಬಿಗ್ ಬಾಸ್ ಗೆ ಸ್ಪರ್ಧಿಸುತ್ತಿರುವುದು ರಾಜ್ ವಂಶದ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.