ಜಗ್ಗೇಶ್ – ದರ್ಶನ್ ಫ್ಯಾನ್ಸ್ ನಡುವೆ ತಂದಿಟ್ಟು ತಮಾಷೆ ನೋಡಿದವನಾರು?

Date:

ನಟ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಿವಾದ ಸುಖಾಂತ್ಯ ಕಂಡಿದೆ. ದರ್ಶನ್ ಅವರೇ ಜಗ್ಗೇಶ್ ಅವರಿಗೆ ಕ್ಷಮೆ ಯಾಚಿಸಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇನ್ನೂ ಇಷ್ಟೆಲ್ಲ ಸಂಭವಿಸಲು ಕಾರಣ ಆ ಒಬ್ಬ ವ್ಯಕ್ತಿ. ಹೌದು ಆ ಒಬ್ಬ ಕಾಣದ ವ್ಯಕ್ತಿ ಇಷ್ಟೆಲ್ಲಾ ಘಟನೆಗಳಿಗೆ ಕಾರಣ.

 

 

ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ಲೀಕ್ ಮಾಡುವ ಮುಖಾಂತರ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಜಗಳ ತಂದಿಟ್ಟು ತಮಾಷೆ ನೋಡುತ್ತಾ ಕುಳಿತಿದ್ದ ಆ ವ್ಯಕ್ತಿ.

 

ಹೌದು ಇತ್ತ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಮಾತಿಗೆ ಮಾತು ನಡೆಯುತ್ತಿದ್ದರೆ ಆ ವ್ಯಕ್ತಿ ಮಾತ್ರ ತಾನು ಅಂದುಕೊಂಡಿದ್ದನ್ನು ಸಾಧಿಸಿ ಖುಷಿಪಡುತ್ತಿದ್ದ. ಹೇಗಾದರೂ ಮಾಡಿ ಜಗ್ಗೇಶ್ ಮತ್ತು ದರ್ಶನ್ ಅವರನ್ನ ಬೇರೆ ಮಾಡಬೇಕು ಎಂದು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಆ ವ್ಯಕ್ತಿಗೆ ಇದೀಗ ನಿರಾಸೆಯಾಗಿದೆ. ಯಾಕೆಂದರೆ ಸ್ವತಃ ದರ್ಶನ್ ಅವರೇ ಜಗ್ಗೇಶ್ ಅವರ ಬಳಿ ಕ್ಷಮೆ ಯಾಚಿಸಿ ಒಂದಾಗಿದ್ದಾರೆ.

 

 

ಇಲ್ಲದ ಆಡಿಯೋವನ್ನು ತಿರುಚಿ ದಂಗೆ ಎಬ್ಬಿಸಿದ ಆ ಕಾಣದ ವ್ಯಕ್ತಿ ಇದೀಗ ಕಂಗಾಲಾಗಿರುವುದಂತೂ ಪಕ್ಕಾ. ಈ ರೀತಿ ಮನೆ ಹಾಳು ಮಾಡುವ ಕೆಲಸವನ್ನು ಆ ವ್ಯಕ್ತಿ ಇಲ್ಲಿಗೆ ನಿಲ್ಲಿಸುತ್ತಾನೋ ಅಥವಾ ಮತ್ತೆ ಮುಂದುವರೆಸುತ್ತಾನಾ ಎಂಬುದು ದೇವರೇ ಬಲ್ಲ..

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...