ಜ್ಯೂನಿಯರ್ ನಂದಮುರಿ ತಾರಕ ರಾಮಾರಾವ್ ಅವರ ಬಗ್ಗೆ ನಿಮಗೆಲ್ಲಾ ಹೆಚ್ಚೇನೂ ಹೇಳಬೇಕಿಲ್ಲ. ದಕ್ಷಿಣ ಭಾರತದ ಸ್ಟಾರ್ ನಟರು ಗಳಲ್ಲಿ ಒಬ್ಬರಾದ ಜ್ಯೂನಿಯರ್ ಎನ್ ಟಿ ಆರ್ ತೆಲುಗು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದಾರೆ. ಈ ಹಿಂದೆ ತನ್ನ ಆತ್ಮೀಯ ಗೆಳೆಯ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರದಲ್ಲಿ ಗೆಳೆಯಾ ಗೆಳೆಯಾ ಹಾಡನ್ನು ಹಾಡುವುದರ ಮೂಲಕ ಜೂನಿಯರ್ ಎನ್ಟಿಆರ್ ತನಗೆ ಕನ್ನಡ ಅತ್ಯದ್ಬುತವಾಗಿ ಬರುತ್ತದೆ ಎಂಬುದನ್ನು ತಿಳಿಸಿದ್ದರು.
ಇದಾದ ಬಳಿಕ ತಾವು ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕನ್ನಡದ ಸ್ಪರ್ಧಿಯೊಬ್ಬರ ಜೊತೆ ಮಾತನಾಡುವಾಗ ಕನ್ನಡವನ್ನೇ ಬಳಸಿದ್ದರು ಎನ್ ಟಿಆರ್. ಎನ್ ಟಿಆರ್ ಅವರ ತಾಯಿ ಕುಂದಾಪುರದವರಾದ್ದರಿಂದ ಎನ್ ಟಿಆರ್ ಅವರು ಕನ್ನಡವನ್ನು ಮಾತನಾಡಬಲ್ಲವರಾಗಿದ್ದಾರೆ.
ಇನ್ನೂ ಆಗಾಗ ಕನ್ನಡದಲ್ಲಿ ಮಾತನಾಡಿ ಕನ್ನಡದ ಮೇಲಿನ ತನ್ನ ಪ್ರೇಮವನ್ನು ವ್ಯಕ್ತಪಡಿಸುವ ಎನ್ ಟಿಆರ್ ಇದೀಗ ಕೊರೊನಾ ವೈರಸ್ ವಿರುದ್ಧ ಹೋರಾಡಲು ಜನರಿಗೆ ಸಂದೇಶವನ್ನು ನೀಡುವ ವಿಡಿಯೋದಲ್ಲಿ ತೆಲುಗು ಬಳಸದೆ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಹಲವಾರು ತಾರೆಯರು ಈ ವಿಡಿಯೋದಲ್ಲಿ ಮಾತನಾಡಿದ್ದು ಎನ್ಟಿಆರ್ ಅವರು ಮಾತ್ರ ಕನ್ನಡದಲ್ಲಿ ಮಾತನಾಡಿರುವುದು ಕನ್ನಡಿಗರ ಮನಸ್ಸನ್ನು ಗೆದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ತುಣುಕು ವೈರಲ್ ಆಗಿದೆ.