ಧೋನಿ ನಿವೃತ್ತಿ ಘೋಷಣೆ ಮಾಡದೆ ಹೋದ್ರೆ ಟೀಂ ನಿಂದ ಹೊರ ಹೋಗ್ತಾರಾ?

Date:

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಈಗ ಎಲ್ಲರ ಕಣ್ಣಿದೆ. ಧೋನಿ ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳ್ತಾರೆ ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಆದ್ರೆ ಈ ಬಗ್ಗೆ ಧೋನಿ ಯಾವುದೇ ಉತ್ತರ ನೀಡಿಲ್ಲ. ಒಂದು ವೇಳೆ ಧೋನಿ ತಾವೇ ನಿವೃತ್ತಿ ಘೋಷಣೆ ಮಾಡದೆ ಹೋದ್ರೆ ಟೀಂ ಇಂಡಿಯಾದಿಂದ ಹೊರ ಹಾಕೋದು ನಿಶ್ಚಿತ ಎನ್ನಲಾಗ್ತಿದೆ.

ವಿಶ್ವಕಪ್ ನಲ್ಲಿ ಧೋನಿ ನಿಧಾನ ಆಟ ಚರ್ಚೆಗೆ ಕಾರಣವಾಗಿದೆ. ಸೆಮಿಫೈನಲ್ ನಲ್ಲಿ ಧೋನಿ ಆರಂಭದಲ್ಲಿ ಆಡಿದ ನಿಧಾನ ಆಟ ಕೆಲವರ ಕೋಪಕ್ಕೂ ಕಾರಣವಾಗಿತ್ತು. ಧೋನಿ ವಿಶ್ವಕಪ್ ಕೊನೆ ಪಂದ್ಯದಲ್ಲಿ ನಿವೃತ್ತಿ ಘೋಷಣೆ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಧೋನಿ ಘೋಷಣೆ ಮಾಡಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ, ಧೋನಿ ನಿವೃತ್ತಿ ಘೋಷಣೆ ಮಾಡದೆ ಹೋದ್ರೆ ತಂಡದಿಂದ ಹೊರ ಬೀಳ್ತಾರಂತೆ.

ಮುಖ್ಯ ಸೆಲೆಕ್ಟರ್ ಎಂ.ಎಸ್.ಕೆ. ಪ್ರಸಾದ್,‌ ಧೋನಿ ಜೊತೆ ಮಾತನಾಡಲಿದ್ದಾರೆ ಎನ್ನಲಾಗಿದೆ.ಧೋನಿಯವರನ್ನು ಹೊರಗಿಡುವ ಕಾಲ ಬಂದಿದೆ ಎಂದು ಪ್ರಸಾದ್ ಸೂಚನೆ ನೀಡಿದ್ದಾರಂತೆ. ಬಿಸಿಸಿಐ ಮೂಲಗಳ ಪ್ರಕಾರ, ಧೋನಿ 6,7 ನೇ ಸ್ಥಾನದಲ್ಲಿ ಬಂದ್ರೂ ರನ್ ಗಳಿಸಲು ಹೆಣಗಾಡಿದ್ರು. ಇದು ತಂಡಕ್ಕೆ ಹಾನಿಕಾರಕ. 2020 ರ ಟಿ-20 ವಿಶ್ವಕಪ್ ನಲ್ಲಿ ಅವ್ರು ಆಡೋದು ಅನುಮಾನ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವ್ರು ಹೋಗ್ತಿಲ್ಲ. ಈ ಮಧ್ಯೆ ಅವ್ರೇ ನಿವೃತ್ತಿ ಘೋಷಣೆ ಮಾಡಿದ್ರೆ ಬೆಸ್ಟ್ ಎಂದು ಅಧಿಕಾರಿ ಮೂಲ ಹೇಳಿವೆ.

Share post:

Subscribe

spot_imgspot_img

Popular

More like this
Related

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ...

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ ದೇವನಹಳ್ಳಿಬೆಂಗಳೂರು: ಕೆಂಪೇಗೌಡ...

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್ ಕ್ರೈಂ ತನಿಖೆ

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್...

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ ಬೆಂಗಳೂರು:ರಾಜ್ಯದ...