ನಾನು ವಿಷಸರ್ಪ, ಕಚ್ಚಿದ್ರೆ ಉಳಿಯಲ್ಲ – ಬಿಜೆಪಿಗೆ ಸೇರಿದ ನಟ ಹೀಗಂದ್ರಾ!

Date:

ಕೋಲ್ಕತ್ತಾ: “ನಾನು ಕಚ್ಚದ ಹಾವೆಂದು ತಿಳಿಯಬೇಡಿ. ನಾನು ನಾಗರ ಹಾವಿದ್ದಂತೆ, ನನ್ನ ಒಂದೇ ಒಂದು ಏಟಿಗೆ ಎದುಗಿದ್ದವರು ಫೋಟೋ ಫ್ರೇಮ್ ಆಗುತ್ತಾರೆ.” ಎಂದು ಖ್ಯಾತ ಬಾಲಿವುಡ್ ನಟ ಮಿಥುನ್​ ಚಕ್ರವರ್ತಿ ಸಿನಿಮೀಯವಾಗಿ ಹೇಳಿದ್ದಾರೆ.

ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ನಂತರ ಮಿಥುನ್​ ಚಕ್ರವರ್ತಿ ಮಾತನಾಡಿದರು.

“ನಾನೊಬ್ಬ ಅಪ್ಪಟ ಬಂಗಾಳಿ ಮನುಷ್ಯ. ನೀವೆಲ್ಲ ನನ್ನ ಡೈಲಾಗ್​ಗಳನ್ನು ಇಷ್ಟಪಡುತ್ತೀರೆಂಬುದು ಗೊತ್ತು. ನನ್ನ ಹೊಸ ಡೈಲಾಗ್​ ಹೇಳುವೆ ಕೇಳಿ.. ನಾನು ಕಚ್ಚದ ಹಾವೆಂದು ಯಾರೂ ತಿಳಿಯಬೇಡಿ. ನಾನು ನಾಗರ ಹಾವು, ನಾನು ಕಚ್ಚಿದರೆ ನೀವು ಉಳಿಯಲಾರಿರಿ.” ಎಂದು ನೆರೆದ ಜನರಿಗೆ ಸಿನಿಮೀಯ ಸ್ಟೈಲ್​ನಲ್ಲಿ ಡೈಲಾಗ್ ಹೊಡೆದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ನನ್ನ ಕನಸು ನನಸಾದಂತೆ. ಇಷ್ಟು ದೊಡ್ಡ ಜನಸಭೆಯಲ್ಲಿ ಭಾಗವಹಿಸುತ್ತೇನೆಂದು ಅಂದುಕೊಂಡಿರಲಿಲ್ಲ. ದೇಶದ ಬಡವರಿಗಾಗಿ ಕೆಲಸ ಮಾಡುವ ನನ್ನ ಆಸೆ ಇಂದು ನೆರವೇರುತ್ತಿದೆ ಎಂದು ಮಿಥುನ್​ ಚಕ್ರವರ್ತಿ ಹೇಳಿದರು.

70 ವರ್ಷದ ಖ್ಯಾತ ಬಾಲಿವುಡ್ ನಟ ಹಾಗೂ ಮಾಜಿ ಟಿಎಂಸಿ ಮುಖಂಡ ಮಿಥುನ್​​ ಚಕ್ರವರ್ತಿಗೆ ಪಶ್ಚಿಮ ಬಂಗಾಳದಲ್ಲಿ ಬಹುದೊಡ್ಡ ಅಭಿಮಾನಿಗಳ ಪಡೆಯೇ ಇದೆ. ಸದ್ಯ ಅವರು ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ನಡೆಯುತ್ತಿದೆ.

Share post:

Subscribe

spot_imgspot_img

Popular

More like this
Related

2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್...

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಕೋಟಿ ಕೋಟಿ ದರೋಡೆ!

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಕೋಟಿ ಕೋಟಿ ದರೋಡೆ! ಬೆಂಗಳೂರು:  ಸಿಲಿಕಾನ್ ಸಿಟಿ...

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ!

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ! ಬೆಂಗಳೂರು: ಕೋಟಿ...

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ ದಕ್ಷಿಣ ಕನ್ನಡ:...